ಬ್ಯಾಂಕ್​ ಆಫ್‌ ಬರೋಡಾದಲ್ಲಿವೆ ಮ್ಯಾನೇಜರ್ ಹುದ್ದೆಗಳು: 42 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ

 

ಬ್ಯಾಂಕ್​ ಆಫ್‌ ಬರೋಡಾದ ರಿಸ್ಕ್​ ಮ್ಯಾನೇಜ್​ಮೆಂಟ್​ ಆಯಂಡ್​ ಫ್ರಾಡ್‌ ರಿಸ್ಕ್​ ಮ್ಯಾನೇಜ್​ಮೆಂಟ್​ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆನ್​ಲೈನ್​ ಅರ್ಜಿಗಳಿಗೆ ಮಾತ್ರ ಮಾನ್ಯತೆ ಇದ್ದು, ದೇಶದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಅಭ್ಯಥಿರ್ಗಳು ಮಾತ್ರ ಅರ್ಜಿಸಲ್ಲಿಸುವಂತೆ ಸೂಚಿಸಲಾಗಿದೆ.

ಎಲ್ಲ ಹುದ್ದೆಗಳಿಗೂ ವೃತ್ತಿ ಅನುಭವ ಕೇಳಲಾಗಿದೆ. ಈ ಹುದ್ದೆಗಳು 5 ವರ್ಷದ ಅವಧಿಗೆ ಒಳಪಟ್ಟಿದ್ದು, ಅಭ್ಯಥಿರ್ಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು. ಆಯ್ಕೆಯಾದ ಅಭ್ಯಥಿರ್ಗಳು ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ 1.5 ಲಕ್ಷ ರೂ.ನ ಸೇವಾ ಬಾಂಡ್​ ಸಲ್ಲಿಸಬೇಕು.

* ಮ್ಯಾನೇಜರ್​ – 4
ಕಂಪ್ಯೂಟರ್​ ಸೈನ್ಸ್​/ ಡೇಟಾ ಸೈನ್ಸ್​/ಐಟಿ/ ಮಷಿನ್​ ಲರ್ನಿಂಗ್​ ಆಯಂಡ್​ ಎಐನಲ್ಲಿ ಬಿಇ/ ಬಿ.ಟೆಕ್​, ಎಂಇ/ ಎಂ.ಟೆಕ್​ ಅಥವಾ ಮ್ಯಾಥಮೆಟಿಕ್ಸ್​/ ಸ್ಟಾ$ಟಿಸ್ಟಿಕ್ಸ್​ನಲ್ಲಿ ಪದವಿ ಪಡೆದಿರಬೇಕು. ಕನಿಷ್ಠ 3 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಕನಿಷ್ಠ 24 ವರ್ಷ, ಗರಿಷ್ಠ 34 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

* ಸೀನಿಯರ್​ ಮ್ಯಾನೇಜರ್​- 27
ಕಂಪ್ಯೂಟರ್​ ಸೈನ್ಸ್​, ಡೇಟಾ ಸೈನ್ಸ್​/ ಮ್ಯಾಥಮೆಟಿಕ್ಸ್​/ ಸ್ಟಾ$ಟಿಸ್ಟಿಕ್ಸ್​ ಆಯಂಡ್​ ೈನಾನ್ಸ್​ನಲ್ಲಿ ಸ್ನಾತಕೋತ್ತರ ಪದವಿ, ಸಿಎ/ ಎಂಬಿಎ/ ಪಿಜಿಡಿಎಂ ಮಾಡಿರಬೇಕು. ಕನಿಷ್ಠ 27, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಕನಿಷ್ಠ 3-5 ವರ್ಷ ವೃತ್ತಿ ಅನುಭವ ಕೇಳಲಾಗಿದೆ.

* ಹೆಡ್​/ ಡೆಪ್ಯುಟಿ ಹೆಡ್​ – 11
ಕಂಪ್ಯೂಟರ್​ ಸೈನ್ಸ್​, ಡೇಟಾ ಸೈನ್ಸ್​/ ಮ್ಯಾಥಮೆಟಿಕ್ಸ್​/ ಸ್ಟಾ$ಟಿಸ್ಟಿಕ್ಸ್​ ಆಯಂಡ್​ ೈನಾನ್ಸ್​ನಲ್ಲಿ ಸ್ನಾತಕೋತ್ತರ ಪದವಿ, ಸಿಎ/ ಎಂಬಿಎ/ ಪಿಜಿಡಿಎಂ ಮಾಡಿರಬೇಕು. ಕನಿಷ್ಠ 32, ಗರಿಷ್ಠ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ ಅಭ್ಯಥಿರ್ಗಳಿಗೆ 100 ರೂ., ಉಳಿದ ಅಭ್ಯಥಿರ್ಗಳಿಗೆ 600 ರೂ. ಅಜಿರ್ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿಸಲ್ಲಿಸಲು ಕೊನೇ ದಿನ: 15.3.2022

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭೂ ಮಾರ್ಗಗಳ ಮೂಲಕ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ಚಿಂತನೆ ನಡೆಸುತ್ತಿದೆ;

Fri Feb 25 , 2022
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಭೂ ಮಾರ್ಗದ ಮೂಲಕ ವಾಪಸ್ ಕರೆತರಲು ಭಾರತ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಸಿಎಂ ಬೊಮ್ಮಾಯಿ ಅವರು ಇಂದು ಬೆಳಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಬಿಕ್ಕಟ್ಟಿನ ಕುರಿತು ವಿವರವಾಗಿ ಮಾತನಾಡಿರುವುದಾಗಿ ತಿಳಿಸಿದ್ದಾರೆ. “ಭಾರತ ಸರ್ಕಾರವು ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಪ್ರಾರಂಭಿಸುತ್ತಿದೆ. ರಷ್ಯಾದ […]

Advertisement

Wordpress Social Share Plugin powered by Ultimatelysocial