ಶ್ರೀ ಸದ್ಗುರು ತ್ಯಾಗರಾಜರ ಸ್ವಾಮಿಗಳ ಆರಾಧನಮಹೋತ್ಸವ.

 

ಕೆ ಆರ್ ಪೇಟೆ ತಾಲೂಕು ಸವಿತಾ ಸಮಾಜ ಮಂಗಳವಾದ್ಯ ಕಲಾವಿದರ ಸಂಘ,ತಾಲೂಕು ಹಡಪದ ಅಪ್ಪಣ್ಣ ಸವಿತಾ ಸಮಾಜ ಸಂಘ, ಪಟ್ಟಣ ಸವಿತಾ ಸಮಾಜ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮೂರನೇ ವರ್ಷದ ಶ್ರೀ ಸದ್ಗುರು ತ್ಯಾಗರಾಜರ ಸ್ವಾಮಿ, ಪುರಂದರದಾಸರು ಮತ್ತು ಕನಕದಾಸರ ಆರಾಧನೆಮಹೋತ್ಸವವನ್ನು 07-03-2023. ಮಂಗಳವಾರ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಿಂದ ಬೆಳ್ಳಿ ರಥದ ಮೂಲಕ ಶ್ರೀ ಸದ್ಗುರುಗಳ ಭಾವಚಿತ್ರವನ್ನು ವೀರಗಾಸೆ ಮಂಗಳವಾದ್ಯ ಕಲಾತಂಡಗಳೊಂದಿಗೆ ಪಟ್ಟಣದಲಿರುವ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ಸುಮಧುರ ಅಂತರಾಷ್ಟ್ರೀಯ ಕಲಾ ತಂಡದಿಂದ ಶ್ರೀ ಸದ್ಗುರು ತ್ಯಾಗರಾಜರ ಆರಾಧನಾ ಕಾರ್ಯಕ್ರಮಕ್ಕೆ ತಾಲೂಕಿನ ಸಮಾಜದ ಬಂಧುಗಳು ಹಾಗೂ ಶ್ರೀ ಸದ್ಗುರು ತ್ಯಾಗರಾಜಸ್ವಾಮಿಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕು ಎಂದು ಮಂಗಳವಾದ್ಯ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಎಂ ಕೆ ಶೇಖರ್ ಮೋದುರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸವಿತಾ ಸಮಾಜ ಟೌನ್ ಅಧ್ಯಕ್ಷ ರವಿಕುಮಾರ್,ಸಂಘದ ಸದಸ್ಯರಾದ ಹೊಸಹೂಳಲು ಪುನೀತ್ ಎಚ್ ಕೆ,ಮೋದುರು ಚೇತನ್,ಬಿಲ್ಲೇನಹಳ್ಳಿ ಸ್ವಾಮಿ,ಮೋದುರು ಅರುಣ್, ಸೇರಿದಂತೆ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕನ್ಯಾ ರಾಶಿ ಭವಿಷ್ಯ.

Thu Mar 2 , 2023
ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ನಿಮ್ಮ ಭಯವನ್ನು ಸಾಧ್ಯವಾದಷ್ಟೂ ಬೇಗ ತೊಡೆದುಹಾಕಬೇಕು ಏಕೆಂದರೆ ಇವು ತಕ್ಷಣವೇ ನಿಮ್ಮ ಆರೋಗ್ಯವನ್ನು ಬಾಧಿಸಬಹುದು ಮತ್ತು ಒಳ್ಳೆಯ ಆರೋಗ್ಯವನ್ನು ಅನುಭವಿಸುವ ನಿಮ್ಮ ಹಾದಿಯಲ್ಲಿ ಅಡ್ಡ ಬರಬಹುದು. ಇಂದು, ನೀವು ಸಾಕಷ್ಟು ಸಕಾರಾತ್ಮಕತೆಯೊಂದಿಗೆ ಮನೆಯಿಂದ ಹೊರಬರುತ್ತೀರಿ, ಆದರೆ ಕೆಲವು ಅಮೂಲ್ಯ ವಸ್ತುವಿನ ಕಳ್ಳತನದಿಂದಾಗಿ, ನಿಮ್ಮ ಮನಸ್ಥಿತಿಗೆ ತೊಂದರೆಯಾಗಬಹುದು. ಒಬ್ಬ ಹಳೆಯ ಸ್ನೇಹಿತರು ಅನಿರೀಕ್ಷಿತ ಭೇಟಿ ನೀಡಿ ಆಹ್ಲಾದಕರ ನೆನಪುಗಳನ್ನು ಮರಳಿ ತರುತ್ತಾರೆ. ನಿಮ್ಮ ಪ್ರೇಮ […]

Advertisement

Wordpress Social Share Plugin powered by Ultimatelysocial