ಕೆ ಆರ್ ಪೇಟೆ ತಾಲೂಕು ಸವಿತಾ ಸಮಾಜ ಮಂಗಳವಾದ್ಯ ಕಲಾವಿದರ ಸಂಘ,ತಾಲೂಕು ಹಡಪದ ಅಪ್ಪಣ್ಣ ಸವಿತಾ ಸಮಾಜ ಸಂಘ, ಪಟ್ಟಣ ಸವಿತಾ ಸಮಾಜ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮೂರನೇ ವರ್ಷದ ಶ್ರೀ ಸದ್ಗುರು ತ್ಯಾಗರಾಜರ ಸ್ವಾಮಿ, ಪುರಂದರದಾಸರು ಮತ್ತು ಕನಕದಾಸರ ಆರಾಧನೆಮಹೋತ್ಸವವನ್ನು 07-03-2023. ಮಂಗಳವಾರ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಿಂದ ಬೆಳ್ಳಿ ರಥದ ಮೂಲಕ ಶ್ರೀ ಸದ್ಗುರುಗಳ ಭಾವಚಿತ್ರವನ್ನು ವೀರಗಾಸೆ ಮಂಗಳವಾದ್ಯ ಕಲಾತಂಡಗಳೊಂದಿಗೆ ಪಟ್ಟಣದಲಿರುವ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ಸುಮಧುರ ಅಂತರಾಷ್ಟ್ರೀಯ ಕಲಾ ತಂಡದಿಂದ ಶ್ರೀ ಸದ್ಗುರು ತ್ಯಾಗರಾಜರ ಆರಾಧನಾ ಕಾರ್ಯಕ್ರಮಕ್ಕೆ ತಾಲೂಕಿನ ಸಮಾಜದ ಬಂಧುಗಳು ಹಾಗೂ ಶ್ರೀ ಸದ್ಗುರು ತ್ಯಾಗರಾಜಸ್ವಾಮಿಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕು ಎಂದು ಮಂಗಳವಾದ್ಯ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಎಂ ಕೆ ಶೇಖರ್ ಮೋದುರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಸವಿತಾ ಸಮಾಜ ಟೌನ್ ಅಧ್ಯಕ್ಷ ರವಿಕುಮಾರ್,ಸಂಘದ ಸದಸ್ಯರಾದ ಹೊಸಹೂಳಲು ಪುನೀತ್ ಎಚ್ ಕೆ,ಮೋದುರು ಚೇತನ್,ಬಿಲ್ಲೇನಹಳ್ಳಿ ಸ್ವಾಮಿ,ಮೋದುರು ಅರುಣ್, ಸೇರಿದಂತೆ ಉಪಸ್ಥಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada