“ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲ.

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗುವುದನ್ನೇ ಎಲ್ಲರೂ ಎದುರು ನೋಡುತ್ತಿದ್ದಾರೆ. ‘ರಾಬರ್ಟ್’ ಬಳಿಕ ದರ್ಶನ್ ಹೊಸ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಿಗೆ ‘ಕ್ರಾಂತಿ’ ಮಾಡ್ಬಹುದು ಅನ್ನೋ ನಿರೀಕ್ಷೆಯಲ್ಲಿ ಡಿ ಬಾಸ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

ಮೊದಲೇ ಹೇಳಿದ ಹಾಗೆ ದರ್ಶನ್ ಪ್ರತಿಯೊಂದು ಯೂಟ್ಯೂಬ್ ಚಾನೆಲ್‌ಗೂ ಸಂದರ್ಶನ ನೀಡುತ್ತಿದ್ದಾರೆ. ಇನ್ನೇ ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿಯಿವೆ ಅನ್ನುವಾಗಲೇ ಅಭಿಮಾನಿಗಳ ಯೂಟ್ಯೂಬ್ ಚಾನೆಲ್‌ಗೆ ತಮ್ಮ ತೋಟದ ದರ್ಶನ ಮಾಡಿಸಿದ್ದಾರೆ.

ಅದೆಷ್ಟೇ ಕೆಲ ಇದ್ದರೂ, ಹೊಸ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದರೂ ದರ್ಶನ್ ಸಂಕ್ರಾಂತಿ ಹಬ್ಬದ ಆಚರಣೆಯನ್ನು ಮಾತ್ರ ನಿಲ್ಲಿಸುವುದಿಲ್ಲ. ಈ ಹಬ್ಬದ ಸಂದರ್ಶನದ ವೇಳೆನೇ ದರ್ಶನ್ ಅಭಿಮಾನಿಗಳ ಯೂಟ್ಯೂಬ್ ಚಾನೆಲ್ ತೂಗುದೀಪ ಡೈನೆಸ್ಟಿಯಲ್ಲಿ ತೋಟ ಹಾಗೂ ಅಲ್ಲಿರುವ ಪ್ರಾಣಿ, ಪಕ್ಷಿಗಳನ್ನು ಪರಿಚಯಿಸಿದ್ದಾರೆ. ಜೊತೆಗೆ ಬ್ಲ್ಯಾಕ್ ಮಾರ್ಕ್ ಬಗ್ಗೆನೂ ಮಾತಾಡಿದ್ದಾರೆ.

ದರ್ಶನ್ ತೋಟದಲ್ಲಿ ಸಂದರ್ಶನಸೆಲೆಬ್ರೆಟಿಗಳು ಸಂದರ್ಶನ ನೀಡುವಾಗ ಮೇಕಪ್ ಮಾಡಿಕೊಂಡು, ದುಬಾರಿ ಕಾಸ್ಟ್ಯೂಮ್ ಹಾಕೊಂಡು ರೆಡಿಯಾಗುತ್ತಾರೆ. ಆದರೆ, ಈ ದರ್ಶನ ಮಾತ್ರ ದರ್ಶನ್ ಅದ್ಯಾವುದನ್ನೂ ಮಾಡದೆ ನೈಜವಾಗಿಯೇ ಕಾಣಿಸಿಕೊಂಡಿದ್ದಾರೆ. ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಚಾಲೆಂಜಿಂಗ್ ಸ್ಟಾರ್ ಫಾರ್ಮ್ ಹೌಸ್ ಪರಿಚಯ ಮಾಡಿಸಿದ್ದಲ್ಲದೆ, ಹಲವು ವಿಷಯಗಳನ್ನು ಇನ್‌ಫಾರ್ಮಲ್ ಆಗಿ ಅಭಿಮಾನಿಗಳೊಂದಿಗೆ ಚರ್ಚಿಸಿದ್ದಾರೆ.ಈ ವೇಳೆ ದರ್ಶನ್ ತನಗೆ ಬ್ಲ್ಯಾಕ್ ಮಾರ್ಕ್ ಇದೆ ಅನ್ನೋದನ್ನು ಚರ್ಚೆ ಮಾಡಿದ್ದಾರೆ. ಯೂಟ್ಯೂಬ್‌ ಚಾನೆಲ್‌ ಜೊತೆ ಮಾತಾಡುವಾಗ ದರ್ಶನ್ ತನ್ನ ಮೇಲೆ ಇರುವಷ್ಟು ಬ್ಲ್ಯಾಕ್ ಮಾರ್ಕ್ ಯಾರ ಮೇಲೂ ಇಲ್ಲ ಅಂತ ಹೇಳಿದ್ದಾರೆ. “ಹಿಟ್ ಸಿನಿಮಾ ಕೊಟ್ಟಿದ್ದೀನಿ.ಪ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದೀನಿ. ಡಬ್ಬಾ ಸಿನಿಮಾಗಳನ್ನು ಕೊಟ್ಟಿದ್ದೀನಿ. ಒಂದೇನಾಗುತ್ತೆ ಅಂದ್ರೆ.. ಅದಕ್ಕೆ ನನ್ನನ್ನು ನಾನು ನೋಡಿಕೊಳ್ಳುವುದಿಲ್ಲ.ನನ್ನಲ್ಲಿ ಏನು ನೋಡುತ್ತಾರೆ ಅಂತ ನಂಗೆ ಗೊತ್ತಿಲ್ಲವಲ್ಲ. ಆ ಮೇಲೆ ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲ. ಇದ್ದಾರೆ ಸುಮಾರು ಜನ. ಆದರೆ, ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋರು ಯಾರು ಇಲ್ಲ. ಅದು ನನ್ನ ಬ್ಯಾಡ್ ಲಕ್‌ ಏನೋ ನನಗೆ ಗೊತ್ತಿಲ್ಲ.” ಎಂದು ದರ್ಶನ್ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋಸತನದಿಂದ, ಕಾರು ಕಳ್ಳತನ ಮಾಡುವವರನ್ನ ಜೈಲಿಗಟ್ಟಿದ ಪೋಲಿಸರು.

Thu Jan 19 , 2023
ಮೋಸತನದಿಂದ, ಕಾರು ಕಳ್ಳತನ ಮಾಡುವವರನ್ನ, ಜೈಲಿಗಟ್ಟಿದ ಹುಕ್ಕೇರಿ ಪೋಲಿಸರು, ಸುಮಾರು ೭,೩೦,೦೦೦/ ರೂಪಾಯಿ ಮೌಲ್ಯದ ಕಾರ, ಹಾಗೂ ಮೋಟರ್ ಸೈಕಲ್‌ಗಳ ವಶ,ಕಳೆದ ೨೦೨೨ ನೇ ಸಾಲಿನ ಜುಲೈ ,ತಿಂಗಳಲ್ಲಿ ಹುಕ್ಕೇರಿ ತಾಲ್ಲೂಕಿನ ಹಂಜ್ಯಾನಟ್ಟಿ, ಗ್ರಾಮ ವ್ಯಾಪ್ತಿಯಲ್ಲಿ ಕಳ್ಳತನವಾದ, ಟೊಯೊಟಾ ಕಂಪನಿಯ ಇಟಿಯೋಸ್,ಕಾರು ಕಳ್ಳತನ ಪ್ರಕರಣಕ್ಕೆ ಬೆನ್ನಟ್ಟದ ಹುಕ್ಕೇರಿ ಪೊಲೀಸರು, ಆರೋಪಿತರನ್ನು ದಸ್ತಗಿರಿ ಮಾಡಿ, ಕಳುವಾದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ,ಯಶಸ್ವಿಯಾಗಿರುತ್ತಾರೆಸದರಿ ಪ್ರಕರಣದಲ್ಲಿನ, ಪ್ರಮುಖ ಆರೋಪಿಯು ಮೂಲತಃ ಮಹಾರಾಷ್ಟ್ರ, ರಾಜ್ಯದ ಔರಂಗಾಬಾದ ನಿವಾಸಿಯಾಗಿದ್ದು, […]

Advertisement

Wordpress Social Share Plugin powered by Ultimatelysocial