ಕಾರ್ಮಿಕರ ದಿನಾಚರಣೆ ಅಂಗವಾಗಿ ಕೆಲವೊಂದು ಸಂಸ್ಥೆಗಳು ಕೊಡುಗೆಗಳನ್ನು ಸಹ ನೀಡಿವೆ.
ಇದರ ಮಧ್ಯೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಆಲಳ್ಳಿಯಲ್ಲಿ ವ್ಯಕ್ತಿಯೊಬ್ಬರು ವಿಶಿಷ್ಟವಾಗಿ ಕಾರ್ಮಿಕ ದಿನಾಚರಣೆ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ಕಬ್ಬಿನ ಹಾಲು ವ್ಯಾಪಾರ ಮಾಡುವ ಪುಟ್ಟಪ್ಪ ಬಲೆಗಾರು ಅವರು ಮೇ 1ರ ಭಾನುವಾರದಂದು ಕಾರ್ಮಿಕರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಬ್ಬಿನ ಹಾಲು ವಿತರಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರತಿನಿತ್ಯ ದುಡ್ಡು ಪಡೆದು ಕಬ್ಬಿನ ಹಾಲು ಮಾರಾಟ ಮಾಡುವ ನಾನು ವರ್ಷಕ್ಕೆ ಒಂದು ದಿನ ಉಚಿತವಾಗಿ ಕಬ್ಬಿನ ಹಾಲು ನೀಡಿದರೆ ಮನಸ್ಸಿಗೆ ಸಂತೋಷವಾಗುತ್ತದೆ. ಪ್ರತಿವರ್ಷವೂ ಕಾರ್ಮಿಕರ ದಿನವಾದ ಮೇ1ರಂದು ಇದನ್ನು ಮಾಡಿಕೊಂಡು ಬಂದಿದ್ದು, ಈ ಬಾರಿ 600 ಜನರು ಕಬ್ಬಿನ ಹಾಲು ಕುಡಿದಿದ್ದಾರೆ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada