ಪೆಟ್ರೋಲ್ ಖಾಲಿಯಾಗಿ ಎಂದು ಅರ್ಧ ದಾರಿಯಲ್ಲಿ ಬೈಕ್ ನಿಲ್ಲಿಸಿದ್ದ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯ ಗುಡೂರಿನಲ್ಲಿ ನಡೆದಿದೆ. ಗುಡೂರು ಬಳಿ ಬೈಕ್ನಲ್ಲಿದ್ದ ಪೆಟ್ರೋಲ್ ಖಾಲಿಯಾಗಿತ್ತು, ಆದ ಕಾರಣ ಬೈಕ್ ನಿಲ್ಲಿಸಿ ಏನು ಮಾಡುವುದೆಂದು ಯೋಚಿಸುತ್ತಾ ನಿಂತಿದ್ದ. ತಾನು ನಿಂತಿದ್ದ ಬದಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆಯುತಿತ್ತು. ಈತ ಸ್ಥಳದಲ್ಲಿ ನಿಂತಿದ್ದನ್ನು ನೋಡಿದ ಆ ಗುಂಪೊಂದು ಈ ಯುವಕ ತಮ್ಮ ವಿರೋಧಿ ಇರಬಹುದು […]