ಪೆಟ್ರೋಲ್ ಖಾಲಿಯಾಗಿದ್ದೇ ಈ ಯುವಕನ ಸಾವಿಕೆ ಕಾರಣವಾಯ್ತಾ..?

ಪೆಟ್ರೋಲ್​ ಖಾಲಿಯಾಗಿ ಎಂದು ಅರ್ಧ ದಾರಿಯಲ್ಲಿ ಬೈಕ್​ ನಿಲ್ಲಿಸಿದ್ದ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ತೆಲಂಗಾಣದ ಯಾದಾದ್ರಿ ಭುವನೇಶ್ವರ ಜಿಲ್ಲೆಯ ಗುಡೂರಿನಲ್ಲಿ ನಡೆದಿದೆ. ಗುಡೂರು ಬಳಿ ಬೈಕ್​ನಲ್ಲಿದ್ದ ಪೆಟ್ರೋಲ್​ ಖಾಲಿಯಾಗಿತ್ತು, ಆದ ಕಾರಣ ಬೈಕ್‌ ನಿಲ್ಲಿಸಿ ಏನು ಮಾಡುವುದೆಂದು ಯೋಚಿಸುತ್ತಾ ನಿಂತಿದ್ದ. ತಾನು ನಿಂತಿದ್ದ ಬದಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆಯುತಿತ್ತು. ಈತ ಸ್ಥಳದಲ್ಲಿ ನಿಂತಿದ್ದನ್ನು ನೋಡಿದ ಆ ಗುಂಪೊಂದು ಈ ಯುವಕ ತಮ್ಮ ವಿರೋಧಿ ಇರಬಹುದು ಎಂದು ತಿಳಿದು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಇದರಿಂದ ಗಾಭರಿಗೊಂಡ ಯುವಕ ಓಡುತ್ತಾ ಪೋಲಿಸರಿಗೆ ಕರೆ ಮಾಡಿದ್ದಾನೆ. ಓಡುವ ರಭಸದಲ್ಲಿ ತನ್ನ ಮುಂದೆ ಭಾವಿ ಇರೋದನ್ನೆ ನೋಡದೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಇನ್ನು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಶವವನ್ನ ಮೇಲಕ್ಕೆ ತೆಗೆದು ಪರಿಶೀಲನೆಯನ್ನ ನಡೆಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಮನಗರದಲ್ಲಿ CM ಬೊಮ್ಮಾಯಿ ಕಾರ್ಯಕ್ರಮದಲ್ಲಿ DK.. DK.. ಘೋಷಣೆ, ಗಲಾಟೆ | Basavaraj Bommai | Speed News

Mon Jan 3 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial