ಕಿಡಿಗೇಡಿಗಳು ಕಟಾವು ಮಾಡಿದ್ದ ಹುರುಳಿಗೆ ಬೆಂಕಿ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಕೂತಾಂಡಹಳ್ಳಿ ಗ್ರಾಮದ ರೈತ ರಾಘವೇಂದ್ರ ಎಂಬುವರಿಗೆ ಸೇರಿದ ಮೂರು ಎಕರೆಯ ಹುರುಳಿ ಕಾಳು ಫಸಲು ಸುಟ್ಟು ಭಸ್ಮವಾಗಿದೆ.ಫಸಲು ಕಟಾವು ಮಾಡಿ ಜಮೀನಿನ ಬಳಿ ಇಡಲಾಗಿತ್ತು.ಕಳೆದ ರಾತ್ರಿ ಕಿಡಿಗೇಡಿಗಳ ಕೃತ್ಯಕ್ಕೆ ಇಡೀ ಫಸಲು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಬೆಲೆಯ ಹುರುಳಿ ಸುಟ್ಟು ಕರಕಲಾಗಿದೆ.ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ […]

ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಗುಡಿಸಿನಲ್ಲಿದ್ದ ಕರು ಸಜೀವ ದಹನವಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಗುಡಿಸಿಲಿಗೆ ಬೆಂಕಿ ಬಿದ್ದಿದ್ದು,ಬೆಂಕಿಯ ಅವಘಡದಿಂದ ದೊಡ್ಡ ಆಲಹಳ್ಳಿಯ ಗ್ರಾಮಸ್ಥ ಕಂಗಾಲಾಗಿದ್ದಾರೆ.ದೊಡ್ಡ ಆಲಹಳ್ಳಿಯ ತಾತಯ್ಯ ಎಂಬುವರಿಗೆ ಸೇರಿದ ಕರು. ಇನ್ನು ಬೆಂಕಿ ನಿಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ :ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ಮಹಾರಾಷ್ಟ್ರದ ಸತಾರ ಘಟಕದಲ್ಲಿ ಅಗ್ನಿದುರಂತದ ಘಟನೆ ಸಂಭವಿಸಿದೆ. ಆಕಸ್ಮಿಕವಾಗಿ ಉಂಟಾದ ಬೆಂಕಿಗೆ ಬಸ್ ಗಳು ಸುಟ್ಟುಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳವು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಬೆಂಕಿಯು ಅಕಸ್ಮಾತ್ ಸಂಭವಿಸಿದ್ದು ಪೋಲೀಸರು ಅದನ್ನ ಪರಿಶೀಲನೆಗೆ ಕೈಗೊಂಡಿದ್ದಾರೆ. ಇದನ್ನೂ ಓದಿ:ಮುಧೋಳ ಜನರಿಗೆ ನಿತ್ಯವೂ ಕಾಡುತ್ತಿದೆ ತೆಲುಗು ಗುಂಡಿಗಳ ಭಯ  

ಆಕಸ್ಮಿಕ ಬೆಂಕಿಯಿಂದ ಎರಡು ಟ್ರ್ಯಾಕ್ಟರ್ ಹಾಗೂ ರಾಗಿ ಹುಲ್ಲು ಬೆಂಕಿಗೆ ಆಹುತಿಯಾದ ಘಟನೆ ಗುಬ್ಬಿ ತಾಲೂಕಿನ ಕಿಟ್ಟ ಕುಪ್ಪೆ ಗ್ರಾಮದಲ್ಲಿ ನಡೆದಿದೆ. ಮೈಜಿನ್ ಸಬ್ ಎನ್ನುವವರಿಗೆ ಸೇರಿದ ರಾಗಿ ಹುಲ್ಲು ಇಂದು ಮಧ್ಯಾಹ್ನ ಆಕಸ್ಮಿಕ ಬೆಂಕಿಯಿಂದ 60 ಸಾವಿರಕ್ಕಿಂತ ಹೆಚ್ಚು ಬೆಲೆಬಾಳುವ ಹುಲ್ಲು ಸಂಪೂರ್ಣ ಸುಟ್ಟುಕರಕಲಾಗಿದೆ. ಸ್ಥಳಕ್ಕೆ ಅಗ್ನಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ರಾಗಿ ಹುಲ್ಲು ಹೊಗೆಯಿಂದ ಕೂಡಿದ್ದು ಬಳಕೆಗೆ ಬರದಂತ ಸ್ಥಿತಿಗೆ ಬಂದಿದೆ. […]

ಬೈಕ್ ಸರ್ವಿಸ್ ಸೆಂಟರ್ ಗೆ ಬೆಂಕಿ ಬಿದ್ದು, 10 ಬೈಕ್ ಗಳು ಸುಟ್ಟು ಭಸ್ಮವಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಚಾಮನಾಳದಲ್ಲಿ ನಡೆದಿದೆ.ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಬೈಕ್ ಗಳು ಬೆಂಕಿಗಾಹುತಿಯಾಗಿದ್ದು, ಸುಮಾರು 10 ಲಕ್ಷ ಮೌಲ್ಯದ ಬೈಕ್ ಗಳು ಸುಟ್ಟುಹೋಗಿವೆ.ಶಹಾಪುರ ರಸ್ತೆಯಲ್ಲಿರೋ ಶಿವ ಸೇಲ್ ಬೈಕ್ ಸರ್ವಿಸ್ ಸೆಂಟರ್ ನಲ್ಲಿ ಅವಘಢ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ […]

ಏಷ್ಯಾದ ಅತಿದೊಡ್ಡ ಸೋಲಾರ್ ಘಟಕ ಎನಿಸಿಕೊಡಿರುವ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸೋಲಾರ್ ಪಾರ್ಕ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕಾರು ಹಾಗೂ ಬೈಕ್ ಧಗಧಗಿಸಿ ಉರಿದಿದೆ. ಸೋಲಾರ್ ಪಾರ್ಕ್ನ ತಿರುಮಣಿ ಭಾಗದ ಬ್ಲಾಕ್ ನಂ.37 ರಲ್ಲಿ ಈ  ಅಗ್ನಿ ಅವಘಢ ಸಂಭವಿಸಿದೆ. ಸೋಲಾರ್ ಪ್ಯಾನಲ್ ಗಳ ಕೆಳಗಿದ್ದ ಹುಲ್ಲಿಗೆ ಬೆಂಕಿ ತಗುಲಿದ್ದರಿಂದ ಈ ಅನಾಹುತ ಸಂಭವಿಸಿರಬಹುದು ಎನ್ನಲಾಗಿದ್ದು, ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಾಂದಿಸಿದ್ದಾರೆ. ಇದನ್ನೂ ಓದಿ […]

ವಿದ್ಯುತ್ ಪರಿವರ್ತಕ(ಟಿಸಿ)ಯಲ್ಲಿ ಸಣ್ಣದಾದ ಬೆಂಕಿ ಕಾಣಿಸಿಕೊಂಡು ಟಿಸಿ ಸ್ಪೋಟಗೊಂಡು ಭಾರೀ ಬೆಂಕಿ ಅನಾಹುತ ಸಂಭವಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದಾಪುರ ಆಶ್ರಯ ಕಾಲೊನಿಯಲ್ಲಿ ನಡೆದಿದೆ…ಟಿಸಿ ಸಂಪೂರ್ಣವಾಗಿ ಸುಟ್ಟು ಹೋಗಿ ಟಿಸಿಯನ್ನು ನೋಡಿ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಸ್ಥಳಕ್ಕೆ ವಿದ್ಯುತ್ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಡಿತಗೊಳಿಸಿದ್ದಾರೆ…. ಇದನ್ನೂ ಓದಿ :ಬ್ಯಾಂಕ್ ಗೆ ಕನ್ನಹಾಕಿದ್ದ ಹೈಪೈ […]

ಆಕಸ್ಮಿಕ ಬೆಂಕಿಯಿಂದ ನಾಲ್ಕು ಗುಡಿಸಲುಗಳು ಸುಟ್ಟು ಭಸ್ಮವಾಗಿದ ಘಟನೆಯು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸೋರೇಕುಂಟೆ ಗ್ರಾಮದಲ್ಲಿ ನಡೆದಿದೆ. ಒಂದರಿಂದ ಮತ್ತೊಂದು ಗುಡಿಸಲಿಗೆ ಬೆಂಕಿ ತಗುಲಿದ್ದು,ಇದರಿಂದ ಯಾವುದೇ ಪ್ರಾಣಾಪಾಯವಿಲ್ಲ ಎಂದು ತಿಳಿದುಬಂದಿದೆ. ಕೂಡಿಟ್ಟಿದ್ದ ಚಿನ್ನಾಭರಣ, ದವಸ ಧಾನ್ಯ , ದಿನಬಳಕೆ ವಸ್ತುಗಳು ಸುಟ್ಟು ಭಸ್ಮವಾಗಿದೆ. ಇದನ್ನೂ ಓದಿ :ಪೆಟ್ರೋಲ್ ಸುರಿದು ವಾಹನಗಳ ನಾಶ

ಪೆಟ್ರೋಲ್ ಸುರಿದು ಕಾರು ಮತ್ತು 8 ಬೈಕ್ ಗಳನ್ನು ದುಷ್ಕರ್ಮಿ ಸುಟ್ಟು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಶ್ರೀನಗರ ರೈಲ್ವೆ ಸ್ಟೇಷನ್ ಸಮೀಪ ನಡೆದಿದೆ..ಮುಸುಕು ಧರಿಸಿ ಬಂದು ಬೀದಿಯಲ್ಲಿ ನಿಂತಿದ್ದ ಕಾರಿಗೆ ನಂತರ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ಬೈಕ್ ಗಳಿಗೆ ಪೆಟ್ರೋಲ್ ಸುರಿದ್ದು,ದುಷ್ಕರ್ಮಿಗಳು ದುಶ್ಕೃತ್ಯ ಎಸಗಿರುವ ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ…ಆರೋಪಿ ಇನ್ನೂ ಪತ್ತೆಯಾಗಿಲ್ಲ ಜೊತೆಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… […]

Advertisement

Wordpress Social Share Plugin powered by Ultimatelysocial