ನಿರಂತರವಾಗಿ ಹೋರಾಟದ ಬದುಕು ಸಾಗಿಸಿರುವ ಜೆಡಿಎಸ್‌ ವರಿಷ್ಠ  ಹೆಚ್‌.ಡಿ. ದೇವೇಗೌಡರು ಎಂದಿಗೂ ಪರ್ಸೆಂಟೇಜ್‌ ರಾಜಕಾರಣ ಮಾಡಲಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌ ಹೇಳಿದರು.ನಗರದಲ್ಲಿ ಸೋಮವಾರ ನಡೆದ, ದೇವೇಗೌಡರ ಜೀವನ ಚರಿತ್ರೆ ಕುರಿತಾದ ‘ಫರೋಸ್ ಇನ್ ಎ ಫೀಲ್ಡ್’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದು ಪರ್ಸೆಂಟೇಜ್‌ ಬಗ್ಗೆ ಅತಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ.ಒಬ್ಬ ರಾಜಕಾರಣಿಯ ಬದುಕನ್ನು ಪರ್ಸೆಂಟೇಜ್‌ನಲ್ಲೇ ಅಳೆಯಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ದೇವೇಗೌಡರು ವಿಭಿನ್ನ ರಾಜಕಾರಣಿಯಾಗಿ ನಿಲ್ಲುತ್ತಾರೆ’ […]

ದಳಪತಿಗಳ ರಾಜಕೀಯ ಹೀಗೇ ಎಂದು ಹೇಳಲು ಬರುವುದಿಲ್ಲ, ಜೊತೆಗೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ ಮುಂದಿನ ದಾಳ ಹೀಗೇ ಉರುಳುತ್ತದೆ ಎಂದು ಬಲ್ಲವರೂ ಇಲ್ಲ. ಸಮಯಕ್ಕೆ ತಕ್ಕಂತೆ ರಾಜಕೀಯ ನಡೆ ಇಡುವ ಗೌಡ್ರು, ಮುಂದಿನ ಚುನಾವಣೆಗೆ ಎಲ್ಲರಿಗಿಂತ ಮೊದಲೇ ಸಜ್ಜಾಗಿದ್ದಾರೆ.ಎರಡು ಅಸೆಂಬ್ಲಿ ಉಪಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಈಗಾಗಲೇ ಘೋಷಿಸಿದೆ, ಎರಡೂ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಸಮುದಾಯದವರನ್ನು ಆರಿಸಿರುವುದು ಗಮನಿಸಬೇಕಾದ ವಿಚಾರ. ಹಾಗಂತ, ಈ ಕ್ಷೇತ್ರಗಳಲ್ಲಿ ಮುಸ್ಲಿಮರ ಮತವೇ ನಿರ್ಣಾಯಕ ಎಂದು ಹೇಳಲು […]

Advertisement

Wordpress Social Share Plugin powered by Ultimatelysocial