ಸುಪ್ರೀಂ ತೀರ್ಪು ಬರುವವರಿಗೂ ರಾಜ್ಯದಲ್ಲಿ ಹಿಜಾಬ್ ವಿವಾದ ಮುಗಿಯುವಂತೆ ಕಾಣಿಸುತ್ತಿಲ್ಲ. ಕೋರ್ಟ್ ಮಧ್ಯಂತರ ಆದೇಶವನ್ನ ಕೊಟ್ಟಿದ್ರೂ, ವಿದ್ಯಾರ್ಥಿನಿಯರು ಹಿಜಾಬ್ ಬಿಟ್ಟು ತರಗತಿಗಳಿಗೆ ಹಾಜರಾಗೋದಕ್ಕೆ ತಯಾರಿಲ್ಲ. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಆದೇಶಕ್ಕೆ ತಲೆಬಾಗಿ ಹೈಕೋರ್ಟ್ ಸೂಚನೆಯಂತೆ ಬುರ್ಖಾ ಹಿಜಾಬ್ನ್ನ ಬೇರೆ ಕೊಠಡಿಯಲ್ಲಿ ತೆಗೆದಿಟ್ಟು ಕ್ಲಾಸ್ಗಳಿಗೆ ಬರ್ತಾ ಇದ್ದರೆ ಇನ್ನು ಕೆಲವೊಂದಿಷ್ಟು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಬೇಕಾದ್ರೂ ಬಿಟ್ಟೇವು ಹಿಜಾಬ್ ಬಿಡಲ್ಲ ಎನ್ನುತ್ತಿದ್ದಾರೆ. ಇನ್ನು ಅನೇಕ ಪ್ರೌಢ ಶಾಲೆಯಲ್ಲಿ ಮಕ್ಕಳು ಪೂರ್ವಸಿದ್ಧತಾ ಪರೀಕ್ಷೇಗಳಿಗೂ ಹಾಜಾರಾಗಿಲ್ಲ. […]