ಅಫ್ಘಾನಿಸ್ತಾನ ಅಕ್ಷರಶಃ ಭೂಮಿ ಮೇಲೆ ಇರುವ ನರಕ ದಂತಾಗಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಾಲಿಬಾನ್ ಗಳ ಅಟ್ಟಹಾಸಕ್ಕೆ ಅಫ್ಘಾನಿಸ್ತಾನದ ಪ್ರಜೆಗಳು ನಲುಗಿಹೋಗಿದ್ದಾರೆ. ಚಿತ್ರ, ವಿಚಿತ್ರ ನಿಯಮ ಗಳಿಗೆ ಅಲ್ಲಿನ ಜನ ಕಂಗಾಲಾಗಿದ್ದಾರೆ. ದೇಶ ಬಿಟ್ಟು ಹೊರ ಹೋಗಲಾಗದೆ, ರಕ್ಕಸರ ಮಧ್ಯೆ ಬದುಕಲು ಆಗದೇ ಪರದಾಡುತ್ತಿದ್ದಾರೆ. ಪ್ರಶ್ನೆ ಮಾಡಿದವರ ಗುಂಡಿಗೆಗೆ ಗುಂಡಿಟ್ಟು ಕೊಲ್ಲುತ್ತಿದ್ದಾರೆ. `ನಮ್ಮ ಜೊತೆ ಸೇರಿಕೊಳ್ಳಿ, ಇಲ್ಲ ಸಾಯಲು ಸಿದ್ಧರಾಗಿ’ ಎಂದು ಹೇಳಿರುವ ತಾಲಿಬಾನಿಗಳು ಕ್ರೌರ್ಯ ಮೆರೆಯುತ್ತಿದ್ದಾರೆ. ಮನೆಯಿಂದ ಹೊರಬಾರದ ಪರಿಸ್ಥಿತಿಯಲ್ಲಿ ಜನರು ಇದ್ದಾರೆ. ಇತ್ತ ಸರ್ಕಾರ ರಚಿಸಿ ತಮ್ಮದೇ ಆಡಳಿತ ನಡೆಸುತ್ತಿರುವ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಸೂಸೈಡ್ ಬಾಂಬರ್ ಗಳನ್ನ ಹೀರೋ ಗಳು ಎಂದು ಕರೆದಿದೆ. ಅಷ್ಟೇ ಅಲ್ಲದೇ ಬಾಂಬರ್ಗಳ ಕುಟುಂಬಕ್ಕೆ ನಗದು, ಭೂಮಿಯನ್ನು ನೀಡುವುದಾಗಿ ಭರವಸೆ ನೀಡಿದೆ. ಯುಎಸ್ ಸೇನೆ ಹಾಗೂ ಆಫ್ಘನ್ ಸೈನಿಕರನ್ನು ಹತ್ಯೆಮಾಡಲು ಸಹಾಯ ಮಾಡಿದ ಸೂಸೈಡ್ ಬಾಂಬರ್ಗಳ ಕುಟುಂಬಸ್ಥರಿಗೆ ಈ ಭರವಸೆಯನ್ನು ತಾಲಿಬಾನಿಗಳು ನೀಡಿದ್ದಾರೆ.
`ಸೂಸೈಡ್ ಬಾಂಬರ್ಗಳು ನಿಜವಾದ ಹೀರೋಗಳು’
ತಾಲಿಬಾನ್ನ ಹಂಗಾಮಿ ಆಂತರಿಕ ಸಚಿವ ಹಕ್ಕಾನಿ ಬಾಂಬರ್ಗಳ ಕುಟುಂಬಸ್ಥರನ್ನು ಕರೆಸಿ ಸಭೆ ನಡೆಸಿದ್ದಾರೆ. ಕಾಬೂಲ್ನ ಹೋಟೆಲ್ವೊಂದರಲ್ಲಿ ಈ ಸಭೆ ನಡೆದಿದೆ. 12 ಕ್ಕೂ ಹೆಚ್ಚು ಸೂಸೈಡ್ ಬಾಂಬರ್ಗಳ ಕುಟುಂಬಸ್ಥರು ಸಭೆಯಲ್ಲಿ ಹಾಜರಿದ್ದರು. ಈ ವೇಳೆ ಮಾತನಾಡಿದ ತಾಲಿಬಾನ್ನ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಸೂಸೈಡ್ ಬಾಂಬರ್ಸ್ಗಳ ಬಗ್ಗೆ ಹಾಡಿ ಹೊಗಳಿದ್ದಾರೆ. ಅವರು ನಮ್ಮ ದೇಶದ ರಿಯಲ್ ಹೀರೋಗಳು. ಈ ದೇಶಕ್ಕೆ ಅವರ ಕೊಡಗೆ ಅಪಾರ, ಅವರನ್ನು ನಾವು ಎಂದಿಗೂ ಮರೆಯಲ್ಲ. ಅವರ ಕುಟುಂಬಸ್ಥರಿಗೆ ನಾವು ಭೂಮಿ ಹಾಗೂ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಮುಂಬೈ: ಮುಂಬೈನ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಆರೋಪದ ಮೇಲೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇನ್ನಿಬ್ಬರು ಸಲ್ಲಿಸಿದ ಜಾಮೀನು ಅರ್ಜಿಗಳ ಮೇಲಿನ ಆದೇಶವನ್ನು ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯವು ಪ್ರಕಟಿಸಲಿದೆ. ಗುರುವಾರ ತನಿಖಾ ಸಂಸ್ಥೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ರಕ್ಷಣಾ ವಕೀಲರ ವ್ಯಾಪಕ ವಾದಗಳನ್ನು ಆಲಿಸಿದ ನಂತರ, ವಿಶೇಷ ನ್ಯಾಯಾಧೀಶ ವಿ.ವಿ.ಪಾಟೀಲ್ ಅವರು ಅಕ್ಟೋಬರ್ 20 ರಂದು ಆದೇಶಕ್ಕಾಗಿ ಪ್ರಕರಣವನ್ನು ಪೋಸ್ಟ್ […]