ಚುನಾವಣಾ ಅಖಾಡಕ್ಕಿಳಿದ ಟೆನ್ನಿಸ್​ ಕೃಷ್ಣ!

ತುಮಕೂರು: 2023ರ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ. ಕಾಂಗ್ರೆಸ್​, ಬಿಜೆಪಿ ಹಾಗೂ ಜೆಡಿಎಸ್​ ಪಕ್ಷಗಳು ರಥಯಾತ್ರೆಗಳನ್ನ ಹಮ್ಮಿಕೊಂಡು ಮತದಾರರನ್ನು ತಮ್ಮತ್ತ ಸೆಳೆಯುತ್ತಿವೆ. ಇತ್ತೀಚೆಗಷ್ಟೆ ಸ್ಯಾಂಡಲ್​ವುಡ್​ ನಟರು ಚುನಾವಣಾ ರಣಾಂಗಣಕ್ಕೆ ಧುಮುಕಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.

ಈ ಸಾಲಿಗೀಗ ಕನ್ನಡ ಹಿರಿಯ ಹಾಸ್ಯ ಕಲಾವಿದರೊಬ್ಬರು ಎಲೆಕ್ಷನ್​ಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಹೌದು.. ಈ ಹಾಸ್ಯ ನಟ ಬೇರೆ ಯಾರು ಅಲ್ಲ. ಟೆನ್ನಿಸ್ ಕೃಷ್ಣ ಅವರು ಎಲೆಕ್ಷನ್​ಗೆ ಸ್ಪರ್ಧಿಸೋದು ಪಕ್ಕಾ ಆಗಿದೆ. ಇದೇ ಮೊದಲ ಬಾರಿಗೆ ತುಮಕೂರಿನ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ನಟ ಟೆನ್ನಿಸ್ ಕೃಷ್ಣ ಅವರು ಕಳೆದ ವರ್ಷ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡಿದ್ದರು. ಪಕ್ಷದ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ತುಮಕೂರು ನಗರದಲ್ಲಿ ಮಾತನಾಡಿದ ಟೆನ್ನಿಸ್‌ ಕೃಷ್ಣ, ತುರುವೇಕೆರೆ ಕ್ಷೇತ್ರದಿಂದ ನಾನು ಆಮ್ ಆದ್ಮಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಬಡವರ ಪರವಾಗಿ ಏನಾದರೂ ಕೆಲಸ ಮಾಡಬಹುದು ಎಂದು ಬಂದಿದ್ದೇನೆ. ಈ ಪಕ್ಷ ಬೇರೆ ರಾಜ್ಯದಲ್ಲಿ ಸಾಧನೆ ಮಾಡಿ ತೋರಿಸಿದೆ. ಕರ್ನಾಟಕದಲ್ಲಿ ಈ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇವೆ. ಬೇರೆ ಪಕ್ಷದಲ್ಲಿ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಈ ಆಪ್​ಗೆ ಬಂದಿದ್ದೇನೆ. ಗೆಲುವು-ಸೋಲು ಇದ್ದಿದ್ದೆ. ಜನ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವ ಬಿಜೆಪಿ ಅಭ್ಯರ್ಥಿಗಳು!

Sat Feb 18 , 2023
ಕೋಲಾರ: ರಾಜ್ಯ ಚುನಾವಣೆಯಲ್ಲಿ ಕೋಲಾರ ವಿಧಾನಸಭಾವು ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಎಲೆಕ್ಷನ್​ಗೆ ನಿಲ್ಲಿಸಿ ಬಿಜೆಪಿ ಗೆಲುವು ಪಡೆಯಬೇಕೆಂದು ಹವಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವರ್ತೂರ್​ ಪ್ರಕಾಶ್​ ಬದಲಿಗೆ ಕೃಷ್ಣಾರೆಡ್ಡಿಯನ್ನ ಕಣಕ್ಕಿಳಿಸಲು ಸಚಿವರಾದ ಡಾ.ಸುಧಾಕರ್ ಮತ್ತು ಮುನಿರತ್ನ ರಣತಂತ್ರ ರೂಪಿಸ್ತಿದ್ದಾರೆ ಎಂದು ಶಾಸಕ ಶ್ರೀನಿವಾಸಗೌಡ ಬಾಂಬ್ ಸಿಡಿಸಿದ್ದಾರೆ. ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ನಾನಾ ಕಸರತ್ತು ಮಾಡುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುವ ಕೃಷ್ಣಾರೆಡ್ಡಿಯನ್ನ […]

Advertisement

Wordpress Social Share Plugin powered by Ultimatelysocial