ಯುವ ಕಾಂಗ್ರೆಸ್‌ ಅಧ್ಯಕ್ಷನಿಗೆ ಚೂರಿಯಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು,

ಚಿಕ್ಕೋಡಿ: ಕಾಗವಾಡ ಯುತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಅಪರಾಜ ಅವರ ಮೇಲೆ ದುಷ್ಕರ್ಮಿಗಳು (Congress leader attacked) ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.ಐನಾಪುರ ಪಟ್ಟಣದಲ್ಲಿದ್ದ ಅವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದು, ಬಳಿಕ ಪರಾರಿಯಾಗಿದ್ದಾರೆ.ಪ್ರಶಾಂತ್‌ ಅವರು ತಮ್ಮ ವಾಹನದಲ್ಲಿ ಸಾಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಅವರಿಗೆ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡಿರುವ ಪ್ರಶಾಂತ್‌ ಅಪರಾಜ ಅವರಿಗೆ ಕಾಗವಾಡ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶಾಂತ್‌ ಅವರು ಪ್ರಾಣಹಾನಿಯಿಂದ ಪಾರಾಗಿದ್ದಾರೆ. ಆದರೆ, ದೇಹದ ಕೆಲವು ಭಾಗಗಳಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.ಪಕ್ಷ ಬದಲಾಯಿಸಿದ್ದರು ಪ್ರಶಾಂತಪ್ರಶಾಂತ್‌ ಅವರು ಈ ಮೊದಲು ಕಾಗವಾಡ ಬಿಜೆಪಿ ಶಾಸಕ ಆಪ್ತನಾಗಿದ್ದರು. ಕೆಲದಿನಗಳ ಹಿಂದೆ ಕಾಂಗ್ರೆಸ್ ಸೇರಿ ಪಕ್ಷದ ಸಂಘಟನೆ ತೀವ್ರಗೊಳಿಸಿದ್ದರು. ಜತೆಗೆ ಅವರಿಗೆ ಯುವ ಕಾಂಗ್ರೆಸ್‌ ಅಧ್ಯಕ್ಷನ ಹುದ್ದೆಯನ್ನೂ ನೀಡಿದ್ದರು.ಪಟ್ಟಣ ಬಂದ್‌ ಮಾಡಿ ಪ್ರತಿಭಟನೆಕಾಂಗ್ರೆಸ್ ಮುಖಂಡ ಪ್ರಶಾಂತ್‌ ಮೇಲಿನ ಹಲ್ಲೆ ಖಂಡಿಸಿ ಮಂಗಲವಾರ ಐನಾಪೂರದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಐನಾಪೂರ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.ಚಾಮರಾಜ ನಗರ: ಅಪರಿಚಿತ ವ್ಯಕ್ತಿ ಬರ್ಬರ ಕೊಲೆಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 209 ಬಳಿ ಕೆಸ್ತೂರು ರಸ್ತೆಯಲ್ಲಿ ವ್ಯಕ್ತಿಯ ರಕ್ತ ಸಿಕ್ತ ಶವ ಪತ್ತೆಯಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಶಂಕೆ ಇದ್ದು, ಮೃತ ವ್ಯಕ್ತಿ ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲ.ಸ್ಥಳಕ್ಕೆ ಯಳಂದೂರು ಪಟ್ಟಣ ಪೊಲೀಸರು ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಆಡುಮಲ್ಲೇಶ್ವರ ಪ್ರಾಣಿಸಂಗ್ರಹಾಲಯಕ್ಕೆ ಬಂಗಾಳದ ಹುಲಿಗಳ ಎಂಟ್ರಿ.

Tue Feb 28 , 2023
  ಚಿತ್ರದುರ್ಗದ ಆಡುಮಲ್ಲೇಶ್ವರ ಅರಣ್ಯಧಾಮಕ್ಕೆ ಕಾಡಿನ ರಾಜ ಬಂಗಾಳದ ಹುಲಿಗಳು ಎಂಟ್ರಿ ಕೊಟ್ಟಿದ್ದು, ಹುಲಿರಾಯನನ್ನು ಕಣ್ತುಂಬಿಕೊಳ್ಳಲು ಪ್ರಾಣಿ ಪ್ರೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಕಳೆದ 10ದಿನಗಳ ಹಿಂದೆ ಮೈಸೂರು ಮೃಗಾಲಯದಿಂದ ಅಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಎರಡು ಬಂಗಾಳದ ಹುಲಿಗಳನ್ನು ತರಲಾಗಿದೆ. 7ವರ್ಷದ ಹೆಣ್ಣುಹುಲಿ ನಿಷಾ ಹಾಗೂ 10ತಿಂಗಳ ಗಂಡು ಹುಲಿ ವಿಜಯ್ ಈಗ ಪ್ರವಾಸಿಗರ ಹಾಗೂ ಪ್ರಾಣಿ ಪ್ರೀಯರ ಕೇಂದ್ರವಾಗಿದ್ದಾರೆ. ಈಗಾಗಲೇ ಹುಲಿಗಳಿಗೆ ಮನೆಗಳನ್ನ ನಿರ್ಮಾಣ ಮಾಡಿರುವ ಅರಣ್ಯ […]

Advertisement

Wordpress Social Share Plugin powered by Ultimatelysocial