ಚಿತ್ರದುರ್ಗದ ಆಡುಮಲ್ಲೇಶ್ವರ ಅರಣ್ಯಧಾಮಕ್ಕೆ ಕಾಡಿನ ರಾಜ ಬಂಗಾಳದ ಹುಲಿಗಳು ಎಂಟ್ರಿ ಕೊಟ್ಟಿದ್ದು, ಹುಲಿರಾಯನನ್ನು ಕಣ್ತುಂಬಿಕೊಳ್ಳಲು ಪ್ರಾಣಿ ಪ್ರೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಕಳೆದ 10ದಿನಗಳ ಹಿಂದೆ ಮೈಸೂರು ಮೃಗಾಲಯದಿಂದ ಅಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಎರಡು ಬಂಗಾಳದ ಹುಲಿಗಳನ್ನು ತರಲಾಗಿದೆ. 7ವರ್ಷದ ಹೆಣ್ಣುಹುಲಿ ನಿಷಾ ಹಾಗೂ 10ತಿಂಗಳ ಗಂಡು ಹುಲಿ ವಿಜಯ್ ಈಗ ಪ್ರವಾಸಿಗರ ಹಾಗೂ ಪ್ರಾಣಿ ಪ್ರೀಯರ ಕೇಂದ್ರವಾಗಿದ್ದಾರೆ. ಈಗಾಗಲೇ ಹುಲಿಗಳಿಗೆ ಮನೆಗಳನ್ನ ನಿರ್ಮಾಣ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ವೀಕ್ಷಣೆಗೆ ಒದಗಿಸಿದ್ದಾರೆ. ್ರಮೇಣ ಹುಲಿಗಳು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ಅವನ್ನು ಕಣ್ತುಂಬಿಕೊಳ್ಳಲು ಜನರು ಅರಣ್ಯಧಾಮದತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ರಜೆ ದಿನ ಹಾಗೂ ಹಬ್ಬಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಚಿರತೆ, ಕರಡಿ, ಜಿಂಕೆ, ಮೊಸಳೆ ಹೀಗೆ ವಿವಿಧ ಪ್ರಾಣಿಗಳೊಂದಿಗೆ ದೇಶ ವಿದೇಶ ತಳಿಯ ಪಕ್ಷಿಗಳನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಇನ್ನು ಮುಂಬರುವ ದಿನಗಳಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿ ಜಿಲ್ಲೆಯ ಪ್ರವಾಸೋದ್ಯಮ ಹೆಚ್ಚಲಿ ಅಂತಾ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada