ಸಿಲಿಂಡರ್‌ ಸ್ಫೋಟವಾಗಿ ಗುಡಿಸಲಿಗೆ ಬೆಂಕಿ,

ಯಾದಗಿರಿ : ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟವಾಗಿ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದಲ್ಲದೆ, 2 ಲಕ್ಷ ರೂ.ನಗದು ಭಸ್ಮವಾದ ದುರ್ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೊರಭಾಗದ ಸಾಯಿನಗರದಲ್ಲಿ ಈ ದುರಂತ ಸಂಭವಿಸಿದೆ. ಆಂಧ್ರಮೂಲದ ಟಿ.ಮಧು ಅವರಿಗೆ ಸೇರಿದ್ದ ಗುಡಿಸಲು ಬೆಂಕಿಗಾಹುತಿಯಾಗಿದೆ.ಸೀಲಿಂಡರ್ ಸ್ಪೋಟದಿಂದ ಗುಡಿಸಲು ಹೊತ್ತಿ ಉರಿಯಿತು. ಸ್ನಾನ ಮಾಡಲು ನೀರು ಕಾಯಿಸಲು ಇಟ್ಟಾಗ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಮಧು ಎಂಬುವರು ನೀರು ಕಾಯಿಸಲು ಇಟ್ಟು ಹೊರಗಡೆ ಬಂದಿದ್ದಾಗ ಸಿಲಿಂಡರ್‌ ಸ್ಫೋಟಿಸಿದೆ. ಗುಡಿಸಲು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ. ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ.ಎರಡು ಲಕ್ಷ ನಗದು ಭಸ್ಮ: ಮಗಳ ಆಪರೇಷನ್ ಮಾಡಿಸಲೆಂದು ಮಧು ಅವರು ಎರಡು ಲಕ್ಷ ರೂ. ನಗದನ್ನು ತಂದು ಇಟ್ಟಿದ್ದರು. ಬೆಳಗ್ಗೆ ಮಗಳ ಆಪರೇಷನ್ ಮಾಡಿಸಲು ಕೊಪ್ಪಳದ ಗಂಗಾವತಿಗೆ ಮಧು ಅವರು ತೆರಳಬೇಕಿತ್ತು. ಘಟನೆ ನಡೆದ ಸ್ಥಳಕ್ಕ ಅಗ್ನಿಶಾಮಕದಳ ಧಾವಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನಟಿ ಶ್ರೀಲೀಲಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ಸುದ್ದಿ

Sun Feb 26 , 2023
  ನಟಿ ಶ್ರೀಲೀಲಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಕನ್ನಡದ ‘ಕಿಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಬೆಡಗಿ ‘ಪೆಳ್ಳಿ ಸಂದD’ ಚಿತ್ರದಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೂ ಪರಿಚಿತರಾದರು. ತೆಲುಗಿನ ಸ್ಟಾರ್ ನಟರ ಜೊತೆ ನಟಿಸೋ ಅವಕಾಶಗಳು ಸಿಗುತ್ತಿದೆ. ಈಗ ಸ್ಪೆಷಲ್ ಸಾಂಗ್‌ವೊಂದಕ್ಕೆ ಶ್ರೀ ಹೆಜ್ಜೆ ಹಾಕ್ತಾರೆ ಎನ್ನಲಾಗ್ತಿದೆ. ಒಂದ್ಕಡೆ ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ನಟ ಪವನ್ ಕಲ್ಯಾಣ್ ಮತ್ತೊಂದು ಕಡೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial