ಮಾ.16 ರಂದು ಹಾಸನ ಜಿಲ್ಲೆಯಲ್ಲಿ ಮತ್ತೊಂದು ಮರ್ಡರ್ ಪ್ರಕರಣ ವರದಿಯಾಗಿತ್ತು. ಮಚ್ಚಿನಿಂದ ಕೊಚ್ಚಿ ರೇವತಿ (33) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಪುರ ಗ್ರಾಮದಲ್ಲಿ ಕೊಲೆ ನಡೆದಿತ್ತು. ಲತೇಶ್ ಎಂಬಾತ ಈ ರೇವತಿ ಮೇಲೆ ಕಣ್ಣು ಹಾಕಿದ್ದನು.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ವಿರೋಧ ಮಾಡಿದ್ದಕ್ಕೆ ರೇವತಿಯನ್ನು ಕೊಚ್ಚಿ ಕೊಲೆ ಮಾಡಿದ್ದನು. ಸದ್ಯ ಆರೋಪಿ ಲತೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಲತೇಶ್ ಸಹ ದೊಡ್ಡಪುರ ಗ್ರಾಮದ ನಿವಾಸಿಯಾಗಿದ್ದಾನೆ. ಈ ಹಿಂದೆ ಪ್ರಕರಣವೊಂದರಲ್ಲಿ ಲತೇಶ್ ಭಾಗಿಯಾಗಿದ್ದನು.
ಚಾಕುವಿನಿಂದ ಇರಿದು ಯುವಕ ಕೊಲೆ
ಈ ಮೂರು ಕೊಲೆಗಳು ಮಾಸುವ ಮುನ್ನ ನಿನ್ನೆ ಮತ್ತೊಂದು ಹತ್ಯೆ ನಡೆದಿದೆ. ಚಾಕುವಿನಿಂದ ಇರಿದು ಯುವಕನ ಬರ್ಬರವಾಗಿರುವ ಘಟನೆ ನಡೆದಿದೆ. ಅಪ್ಸರ್ (27) ಕೊಲೆಯಾದ ಯುವಕ. ಅಪ್ಸರ್ ಸಕಲೇಶಪುರದ ಕುಶಾಲನಗರ ಬಡಾವಣೆಯ ನಿವಾಸಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಐವರ ವಿರುದ್ಧ ದೂರು, ಸಿಸಿಟವಿಯಲ್ಲಿ ದೃಶ್ಯ ಸೆರೆ
ಕೊಲೆಯಾದ ಅಪ್ಸರ್ ಅಕ್ರಮ ದನದ ಮಾಂಸ ಮಾರಾಟ ಹಾಗೂ ಚರಂಡಿಯಲ್ಲಿ ತ್ಯಾಜ್ಯ ಬಿಸಾಡುತ್ತಿದ್ದನಂತೆ. ಇದೇ ವಿಚಾರಕ್ಕೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು ಹಿಡಿದು ಗಲಾಟೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅಪ್ಸರ್ ಕೊಲೆ ಸಂಬಂಧ ಹೆಸಾನ್ ಖುರೇಷಿ, ಶಾಹಿದ್, ನಯಾಝ್ ಖುರೇಷಿ, ಸಲ್ಮಾನ್ ಖುರೇಷಿ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ.
SP ಆರ್.ಶ್ರೀನಿವಾಸ್ಗೌಡ ಮಾಹಿತಿ
ಸರಣಿ ಕೊಲೆಗಳಿಂದ ಹಾಸನ ಜಿಲ್ಲೆಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಪೊಲೀಸರು ಒಂದು ಪ್ರಕರಣ ಭೇದಿಸಿದ್ದು. ಉಳಿದ ಮೂರು ಕೊಲೆ ಪ್ರಕರಣದ ಆರೋಪಿಗಳ ಸುಳಿವು ಪತ್ತೆ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಆರೋಪಿಗಳ ಬಂಧನ ಮಾಡಲಾಗುವುದು ಎಂದು SP ಆರ್.ಶ್ರೀನಿವಾಸ್ಗೌಡ ಮಾಹಿತಿ ನೀಡಿದ್ದಾರೆ.
ಸಾವಿನಲ್ಲಿ ಸಾರ್ಥಕತೆ, ನಾಲ್ವರ ಜೀವ ಉಳಿಸಿ ಅಂಧರಿಗೆ ಬೆಳಕಾದ RSS ಕಾರ್ಯಕರ್ತ
ಆರ್ ಎಸ್ಎಸ್ ಕಾರ್ಯಕರ್ತ (RSS Activist) ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ತಮ್ಮ ಅಂಗಾಂಗಗಳನ್ನು ದಾನ (Organ Donation) ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಬೆಳಗಾವಿಯ ಮಹಾಬಳೇಶ್ವರ ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ (Umesh Basanni Dandagi) ಎಂಬುವವರ ಮಿದುಳು ನಿಷ್ಕ್ರಿಯಗೊಂಡಿತ್ತು (Barin Dead).ಇದರಿಂದ ಆತನ ಕುಟುಂಬಸ್ಥರು (Family) ಅಂಗಾಗ ದಾನ ಮಾಡುವ ಮೂಲಕಸಾವಿನಲ್ಲೂ ಸಾರ್ಥಕತೆ ಮೆರೆಯುವ ಮೂಲಕನಾಲ್ವರ ಜೀವ ಉಳಿಸಿ ಅಂಧರಿಬ್ಬರ ಬಾಳಿಗೆ ಬೆಳಕಾಗಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada