“ಕಬ್ಜ” ಸಿನಿಮಾದ ಮೊದಲ ಮಾಸ್ ಸಾಂಗ್ ಇಂದು ಸಂಜೆ 7 ಕ್ಕೆ ರಿಲೀಸ್ ಆಗಲಿದೆ..ನಿಮ್ಮ ಹಾರೈಕೆ ಪ್ರೋತ್ಸಾಹ ಚಿತ್ರ ತಂಡದ ಮೇಲೆ ಸದಾ ಹೀಗೆ ಇರಲಿ…ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಹಾಗು ಮೆಗಾ ಸ್ಟಾರ್ ಚಿರಂಜೀವಿ ಅವರು ನಮ್ಮ ತಂಡದಿಂದ ಪ್ರೀತಿಯ ಆಹ್ವಾನ ಸ್ವೀಕರಿಸಿ ಸಮಾರಂಭದಲ್ಲಿ ಹಾಜರಾಗೋ ಭರವಸೆ ಕೊಟ್ಟಿದ್ರು…ಆದರೆ ಟಾಲಿವುಡ್ ಖ್ಯಾತ ನಿರ್ದೇಶಕ ಕೆ ವಿಶ್ವನಾಥ್ ಅವರ ನಿಧನದಿಂದ ಗಣ್ಯರು ಆ ನೋವಿನಿಂದ ಹೊರ ಬಂದಿಲ್ಲ. ಹೀಗಾಗಿ ಇಂದು ಕಾರ್ಯಕ್ರಮದಲ್ಲಿ ಕೊನೆಯ ಹಂತದಲ್ಲಿ ..ಗಣ್ಯರ ಉಪಸ್ಥಿತಿಯಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ…
ಹೈದರಾಬಾದ್ ನಲ್ಲಿ ಕೆಲವು ಕಾರ್ಯಕ್ರಮಗಳು ಸಹ ರದ್ದಾಗಿವೆ.. ಮುಂದಿನ ದಿನಗಳಲ್ಲಿ “ಕಬ್ಜ” ಚಿತ್ರದ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಇನ್ನು ನಮ್ಮ ತಂಡದ ಪೂರ್ವ ನಿರ್ಧರಿತ ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಕೆ ವಿಶ್ವನಾಥ್ ಅವರಿಗೆ ಮೌನಾಚರಣೆ ಮೂಲಕ ಶಾಂತಿ ಕೋರಿ “ಕಬ್ಜ” ಸಾಂಗ್ ರಿಲೀಸ್ ಮಾಡಲಿದ್ದೇವೆ. ನಿಮ್ಮ ಪ್ರೋತ್ಸಾಹ ಬೆಂಬಲ ಬಯಸುತ್ತಾ .
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada