ಕಲ್ಮಹಳ್ಳಿ ಗ್ರಾಮದಲ್ಲಿ ಬಯಲಿನ ಮಲಮೂತ್ರಗಳನ್ನು ಸ್ವಚ್ಛ ಶ್ರಮಾಧಾನ ಮಾಡಿದ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು!ಬಯಲು ಬಹಿರ್ದೆಸೆಗೆ ಮುಕ್ತಿ ಹಾಡಿದ ಶಿಬಿರಾರ್ಥಿಗಳು ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಂದ ಬಯಲು ಶೌಚ ತೊಳೆಯುವ ಅಭಿಯಾನಕ್ಕೆ ಗ್ರಾಮಸ್ಥರಿಂದ ಪ್ರಶಂಸೆ ನಂಜನಗೂಡು ತಾಲೂಕಿನ ಕಲ್ಮಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ವಾರ್ಷಿಕ ಶಿಬಿರ.ಮೈಸೂರಿನ ಮಹಾರಾಜ ಕಾಲೇಜು ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ವಿನೂತನ ಕಾರ್ಯಕ್ರಮ.ಶಿಬಿರಾಧಿಕಾರಿಗಳಾದ ಡಾ.ಎಸ್.ಕೃಷ್ಣಪ್ಪ ಮತ್ತು ಡಾ. ಮಧುಸೂದನ್ ನೇತೃತ್ವದಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ಕ್ಯಾಂಪ್.ಕಲ್ಮಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲೇ ಬಯಲು ಬಹಿರ್ದೆಸೆ ಮಾಡುತ್ತಿದ್ದ ಗ್ರಾಮಸ್ಥರು.ಕಾಂಕ್ರೀಟ್ ರಸ್ತೆಯ ಎರಡು ಬದಿಯಲ್ಲೂ ಮಲ ಮೂತ್ರ ಮಾಡಿ ದುರ್ನಾತ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಶಾಲಾ ಮಕ್ಕಳು ರೈತರು ಒಕ್ಕಣೆ ಮಾಡುವ ಕಣದಲ್ಲೂ ಮಲ ಮೂತ್ರ ವಿಸರ್ಜನೆ ಗ್ರಾಮದ ಕಾಂಕ್ರೀಟ್ ರಸ್ತೆ ಮತ್ತು ಒಕ್ಕಣೆ ಕಣದಲ್ಲೂ ಮಲ ಮೂತ್ರ ತುಂಬಿಕೊಂಡು ಗಬ್ಬೆದ್ದು ನಾರುತಿತ್ತು ಬಯಲು ಬಹಿರ್ದೆಸೆಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಗ್ರಾಮಸ್ಥರಿದ್ದರು.ಇದಕ್ಕೆ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಶಾಲೆಯ ಮುಂಭಾಗದಲ್ಲಿಯೇ ಬಯಲು ಬಹಿರ್ದೆಸೆ ಮಾಡಿದ್ದ ಗ್ರಾಮಸ್ಥರು ನೀರು ಹಾಕಿ ತೊಳೆದು ಸ್ವಚ್ಛ ಮಾಡಿದ ಶಿಬಿರಾರ್ಥಿಗಳು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನೀರು ಹಾಕಿ ತೊಳೆದ ವಿದ್ಯಾರ್ಥಿಗಳು.ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಬಯಲು ಬಹಿರ್ದೆಸೆಗೆ ಮುಕ್ತಿ ಬಿಳಿಗೆರೆ ಗ್ರಾಮ ಪಂಚಾಯಿತಿ ಮಾಡಬೇಕಾಗಿದ್ದ ಕೆಲಸವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.ಗ್ರಾಮದ ಎಲ್ಲಾ ಚರಂಡಿಯನ್ನು ಸ್ವಚ್ಛಗೊಳಿಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ವಿದ್ಯಾರ್ಥಿಗಳ ಈ ಅಭಿಯಾನಕ್ಕೆ ಗ್ರಾಮಸ್ಥರು ಮತ್ತು ಸಾರ್ವಜನಿಕರಿಂದ ಪ್ರಸಂಶೆ ವ್ಯಕ್ತವಾಗಿದೆರಸ್ತೆಗಳಲ್ಲಿ ಇನ್ನು ಮುಂದೆ ಬಯಲು ಬಹಿರ್ದೆಸೆ ಮಾಡುವುದಿಲ್ಲ ಎಂದು ಪಣತೊಟ್ಟ ಗ್ರಾಮಸ್ಥರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…