ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ 9 ವರ್ಷ ಕೆಲಸ ಮಾಡಿದ್ದ ನೇಪಾಳಿ ದಂಪತಿ ಬಳಿಕ ಉಂಡ ಮನೆಗೇ ಕನ್ನ ಹಾಕಿ ಪರಾರಿಯಾಗಿದ್ದಾರೆ. (Theft by Nepalese couple ) ನೇಪಾಳ ಮೂಲದ ಶಿವರಾಜ್ ಮತ್ತು ಜಯಂತಿ ಎಂಬುವರೇ ಆರೋಪಿ ದಂಪತಿ.ಒಮ್ಮೆ ನೇಪಾಳಕ್ಕೆ ಹೋದರೆ ಮತ್ತೆ ಸಿಗಲಾರೆವು ಎಂಬ ಹುಂಬತನದಲ್ಲಿ ದಂಪತಿ ಕಳ್ಳತನದ ಕೃತ್ಯ ಎಸಗಿದ್ದಾರೆ. ಗೋಲ್ಡನ್ ಬೆಲ್ ಅಪಾರ್ಟ್ಮೆಂಟ್ ನಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡೇ ಕನ್ನ ಹಾಕಿದ್ದಾರೆ.ಮನೆಯಲ್ಲಿ ಯಾರು ಇಲ್ಲದಿದ್ದ ಸಂದರ್ಭ ನೋಡಿ ಕಳ್ಳತನ ಮಾಡಿದ್ದರು. ಮನೆಯ ಸದಸ್ಯರು ಮೂರು ದಿನ ಕೊಡಗಿಗೆ ಹೋಗಿದ್ದಾಗ ಕಳ್ಳತನ ಎಸಗಲಾಗಿದೆ. 230 ಗ್ರಾಂ ಚಿನ್ನಾಭರಣ, 2 ಲ್ಯಾಪ್ ಟಾಪ್ ಕದ್ದು ಶಿವರಾಜ್ ಮತ್ತು ಜಯಂತಿ ಪರಾರಿಯಾಗಿದ್ದಾರೆ.ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಡಿಆರ್ ಮತ್ತು ನೆಟ್ ವರ್ಕ್ ಡಂಪ್ ತೆಗೆದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ. ರೈಲ್ವೆನಿಲ್ದಾಣದ ಟಿಕೆಟ್ ಬುಕ್ಕಿಂಗ್ ಕೌಂಟರ್ ನಲ್ಲೂ ಪರಿಶೀಲನೆ ನಡೆದಿದೆ. ನೇಪಾಳಕ್ಕೆ ಹೋದವರ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಹೆಸರಲ್ಲಿ ಯಾವುದಾದ್ರೂ ಟಿಕೆಟ್ ಬುಕ್ ಅಗಿದೆಯೇ ಎಂದು ಬಸ್ ಬುಕ್ಕಿಂಗ್ ಸೆಂಟರ್ ಗಳಲ್ಲಿ ತಪಾಸಣೆ ನಡೆಸಲಾಗಿದೆ. ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದು, (Custodial death) ಇದೊಂದು ಲಾಕಪ್ ಡೆತ್ ಕುಟುಂಬಿಕರು ಆರೋಪಿಸಿದ್ದಾರೆ.ಪೊಲೀಸ್ ಕಸ್ಟಡಿಯಲ್ಲಿದ್ದ ವಿನೋದ್ ಕಾಟನ್ ಪೇಟೆಯ ನಿವಾಸಿಯೇ ಆಗಿದ್ದು, ಪ್ರಕರಣವೊಂದರ ಸಂಬಂಧ ಬುಧವಾರ ಆತನನ್ನು ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಗುರುವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾಗಿತ್ತು. ಆದರೆ, ಗುರುವಾರ ಬೆಳಗ್ಗೆ 3.45ಕ್ಕೆ ಠಾಣೆ ಎಸ್ಎಚ್ಒ ಆರೋಪಿ ವಿನೋದ್ನನ್ನು ಗಮನಿಸಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada