ಕೈ ಟಿಕೆಟ್‌ಗಾಗಿ ಅಲ್ಪಸಂಖ್ಯಾತರಿಂದ ಹೆಚ್ಚಿದ ಒತ್ತಡ.

ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲೇಬೇಕೆಂದು ಪಟ್ಟು.

ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರನ್ನ ಭೇಟಿ ‌ಮಾಡಿದ ನಿಯೋಗ.

ನಿನ್ನೆ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌‌ಗೆ ಮನವಿ ಸಲ್ಲಿಸಿದ ನಿಯೋಗ.

ಮುಸ್ಲಿಂ ಸಮುದಾಯದ ಧರ್ಮ ಗುರುಗಳು, ಮೌಲ್ವಿಗಳು, ಸಮಾಜದ ಮುಖಂಡರನ್ನೊಳಗೊಂಡ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಕೆ.

ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿಯಾದ್ರೂ ಟಿಕೆಟ್‌ ನೀಡಬೇಕೆಂದು ಒತ್ತಡ..

ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಮೇಲೆ ಮುಸ್ಲಿಂ ಸಮುದಾಯದ ಕಣ್ಣು.

ಕಳೆದ ವಾರ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ್ದ ಮುಸ್ಲಿಂ ಸಮುದಾಯದ ಮುಖಂಡರು, ಮೌಲ್ವಿಗಳು.

ಸಭೆಯಲ್ಲಿ ಚರ್ಚೆ ಮಾಡಿ ಒಬ್ಬರಿಗೆ ಟಿಕೆಟ್‌ ಪಡೆಯಲೇಬೇಕು, ಈ ನಿಟ್ಟಿನಲ್ಲಿ ಏನೇನೂ ಮಾಡಬೇಕೆಂದು ತೀರ್ಮಾನ.

ಅದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ನ್ನ ಭೇಟಿ ಮಾಡಿ ಮನವಿ ಸಲ್ಲಿಕೆ‌.

ಒಂದು ವೇಳೆ ಟಿಕೆಟ್‌ ನೀಡದೆ ಹೋದ್ರೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದಿಂದ ಕಾಂಗ್ರೆಸ್‌ಗೆ ಪೆಟ್ಟು ಬೀಳುವುದು ಖಚಿತ ಎಂದು ಎಚ್ಚರಿಕೆ ನೀಡಿದ ಮುಸ್ಲಿಂ ಸಮುದಾಯದ ಮುಖಂಡರು, ಮೌಲ್ವಿಗಳು.

ಇದರಿಂದಾಗಿ ಕೈ ಹೈಕಮಾಂಡ ಮತ್ತೆ ಕಗ್ಗಂಟಾದ ಟಿಕೆಟ್‌ ಹಂಚಿಕೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಯಲ್ಲಿ ಪೊರಕೆ ಬಳಕೆಯ ಬಗ್ಗೆ ನಿಮಗೇಷ್ಟು ಗೊತ್ತು?

Thu Jan 19 , 2023
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :‌ನಮ್ಮ ದೇಶದಲ್ಲಿ, ಅನೇಕ ಜನರು ಇನ್ನೂ ವಾಸ್ತು ಶಾಸ್ತ್ರಗಳ ನಿಯಮಗಳನ್ನು ಅನುಸರಿಸುತ್ತಾರೆ. ಅದರಲ್ಲೂ ಈ ವಸ್ತುಗಳನ್ನು ಮನೆಯ ಬಳಸುವಾಗ ಜಾಗರುಕತೆಯನ್ನು ವಹಿಸಬೇಕಾಗುತ್ತದೆ ಎಲ್ಲೆಂದರಲ್ಲಿ ಇಟ್ಟಲ್ಲಿ ನಮಗೆ ತೊಂದರೆ ತಪ್ಪಿದಲ್ಲ.. ವಾಸ್ತು ಶಾಸ್ತ್ರದ ಪ್ರಕಾರ, ಮನೆಯನ್ನು ಗುಡಿಸುವ ಪೊರಕೆಯನ್ನು ಎಸೆಯಬಾರದು. ಅದನ್ನು ಎಲ್ಲಿ ಬೀಳುತ್ತದೋ ಅಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಸಂಪತ್ತಿನ ಮೂಲವಾದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಎಂದು ವಾಸ್ತು ಶಾಸ್ತ್ರ ತಜ್ಞರು ಹೇಳುತ್ತಾರೆ. ಅಲ್ಲದೆ, ಪೊರಕೆಯ […]

Advertisement

Wordpress Social Share Plugin powered by Ultimatelysocial