ದುನಿಯಾ ವಿಜಯ್ ಟಾಲಿವುಡ್ನಲ್ಲಿ ಮಿಂಚೋಕೆ ಶುರು ಮಾಡಿದ್ದಾರೆ. ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಮೂಲಕ ಖಳನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗ ಈ ಸಿನಿಮಾ ರಿಲೀಸ್ ಆಗಿದ್ದು, ಬ್ಲ್ಯಾಕ್ ಕೋಬ್ರಾ ನೋಡಿ ಭೇಷ್ ಅನ್ನುತ್ತಿದ್ದಾರೆ. ದುನಿಯಾ ವಿಜಯ್ ಸ್ಯಾಂಡಲ್ವುಡ್ನಲ್ಲಿ ನಟನೆ ಜೊತೆ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ‘ಸಲಗ’ ಹಿಟ್ ಲಿಸ್ಟ್ ಸೇರಿದೆ. ಒಂದ್ಕಡೆ ತೆಲುಗು ಅವಕಾಶವನ್ನೂ ಬಿಡದೆ, ಇನ್ನೊಂದು ಕಡೆ ‘ಸಲಗ’ ಸಕ್ಸಸ್ ಅನ್ನೂ ಬಿಡದೆ ಎರಡೂ ಸಂಭಾಳಿಸಿಕೊಂಡು ಬಂದಿದ್ದಾರೆ. “ನನ್ನ ತಾಯಿ ಏನು ಬೇಡಿಕೊಂಡಿದ್ಲೋ ಗೊತ್ತಿಲ್ಲ.. ಬಾಲಯ್ಯ ಜೊತೆ ನಟಿಸೋ ಅವಕಾಶ ಸಿಕ್ತು” ದುನಿಯಾ ವಿಜಯ್! ದುನಿಯಾ ವಿಜಯ್ ಮನಸ್ಸು ಮಾಡಿದ್ದರೆ ‘ವೀರ ಸಿಂಹ ರೆಡ್ಡಿ’ ಎರಡನೆ ಸಿನಿಮಾನೋ, ಮೂರನೆಯದ್ದೋ ಆಗಬೇಕಿತ್ತು. ಟಾಲಿವುಡ್ ಯಂಗ್ ಟೈಗರ್ ಜೂ.ಎನ್ಟಿಆರ್ ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿತ್ತು. ಆದರೆ, ಆ ಚಾನ್ಸ್ ಅನ್ನು ದುನಿಯಾ ವಿಜಯ್ ಕೈ ಬಿಟ್ಟಿದ್ದರು. ಅದಕ್ಕೆ ಕಾರಣವೇನು? ಅನ್ನೋದನ್ನು ‘ವೀರ ಸಿಂಹ ರೆಡ್ಡಿ’ ಸಿನಿಮಾದ ಸಂದರ್ಶನದ ವೇಳೆ ರಿವೀಲ್ ಮಾಡಿದ್ದಾರೆ.
https://play.google.com/store/apps/details?id=com.speed.newskannada