ಮನೆ ಕಟ್ಟೆ ನಿರ್ಮಾಣಕ್ಕೆ ಇಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮಗುಚಿ ಇಬ್ಬರು ಮೃತಪಟ್ಟಿರುವ ಘಟನೆ ಚಳ್ಳಕೆರೆ ತಾಲ್ಲೂಕು ರೇಕಲಗೆರೆ ಲಂಬಾಣಿ ಹಟ್ಟಿ ಬಳಿ ನಡೆದಿದೆ.ಮೊಳಕಾಲ್ಮೂರು ತಾಲ್ಲೂಕು ಯರೇನಹಳ್ಳಿಯಿಂದ ಚಿತ್ರದುರ್ಗ ನಗರಕ್ಕೆ ಕಟ್ಟಡ ನಿರ್ಮಾಣ ಕ್ಕೆಂದು ಇಟ್ಟಿಗೆ ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿ ಸ್ಥಳದಲ್ಲೆ ಯರನೇಹಳ್ಳೀಯ ಶಶಿಕುಮಾರ್ ಹಾಗೂ ಬಸವರಾಜ್ ಮೃತಪಟ್ಟಿದ್ದಾರೆ . ಘಟನೆ ಸ್ಥಳಕ್ಕೆ ನಾಯಕನಹಟ್ಟಿ ಪಿಎಸ್ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ನಾಯನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ