ತುಮಕೂರು: ಇನೋವಾ ಕಾರೊಂದು ಪ್ಯಾಸೆಂಜರ್ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ೧೩ ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪಾವಗಡ ತಾಲೂಕಿನ ಟಿ.ಎನ್.ಪೇಟೆ ಬಳಿ ನಡೆದ ಘಟನೆಯಲ್ಲಿ ಆಟೋದಲ್ಲಿದ್ದ ವರ್ಷಿತ್ ರೆಡ್ಡಿ (೧೩) ಎಂಬ ಬಾಲಕ ಮೃತಪಟ್ಟಿದ್ದಾನೆ.
ಆಟೋದಲ್ಲಿದ್ದ ಎಂಟು ಜನರಿಗೆ ತೀವ್ರತರವಾದ ಗಾಯಗಳಾಗಿವೆ.
ರೊದ್ದಂನಿಂದ ಪಾವಗಡ ಕಡೆ ಬರುತ್ತಿದ್ದ ಪ್ಯಾಸೆಂಜರ್ ಆಟೋದಲ್ಲಿ ಸುಮಾರು ಹತ್ತು ಜನರು ಪ್ರಯಾಣಿಸುತ್ತಿದ್ದರು. ಇನೊವಾ ಕಾರು ಪೆನುಗೊಂಡದಿಂದ ಚಿತ್ರದುರ್ಗ ಕಡೆ ಹೋಗುತ್ತಿತ್ತು.
ಗಾಯಾಳುಗಳಿಗೆ ಹಿಂದೂಪುರ, ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರವಾಗಿ ಗಾಯಗೊಂಡವರು ತುಮಕೂರು, ಬೆಂಗಳೂರಿಗೆ ಶಿಪ್ಟ್ ಮಾಡಲಾಗಿದೆ. ಪಾವಗಡ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
https://play.google.com/store/apps/details?id=com.speed.newskannada