ಕಾಮಿಡಿ ಕಿಲಾಡಿಗಳಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಶ್ರಿ ಅದೇ ಶೋನಿಂದ ಸ್ನೇಹಿತರಾಗಿದ್ದರು.
ಸ್ನೇಹಾ ಪ್ರೀತಿಯಾಗಿ ಬದಲಾಗಿ ಮದುವೆ ಆಗಿದ್ದಾರೆ. ಈಗ ಮುದ್ದಾದ ಹೆಣ್ಣುಮಗುವಿನ ಪೋಷಕರಾಗಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಚಂದನ್ ಕುಮಾರ್, ಕವಿತಾ ಗೌಡ ಸ್ನೇಹಿತರಾಗಿದ್ದರು. ಅದರ ಮೂಲಕ ಪ್ರೀತಿಯಾಗಿ ವಿವಾಹವಾಗಿದ್ದಾರೆ.
ಮಿಸ್ಟರ್ ಅಂಡ್ ಮಿಸೆಸ್ ರಂಗೇಗೌಡ ಧಾರಾವಾಹಿ ಮೂಲಕ ಹೆಸರುವಾಸಿಯಾಗಿದ್ದ ಅಮೃತಾ-ರಘು ಪ್ರೀತಿಸಿ ಮದುವೆ ಆಗಿದ್ದಾರೆ. ಇವರಿಗೆ ಮುದ್ದಾದ ಹೆಣ್ಣು ಮಗು ಇದೆ. ಅಮೃತಾ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ರಘು ತೆಲುಗು ಸೀರಿಯಲ್ಗೆ ಹೋಗಿದ್ದಾರೆ.
ಕುಲವಧು ಧಾರಾವಾಹಿ ಮೂಲಕ ಪರಿಚಯವಾದ ದೀಪಿಕಾ ಮತ್ತು ಆಕರ್ಷ್ ಸಹ ಪ್ರೀತಿಸಿ ಮದುವೆ ಆಗಿದ್ದಾರೆ. ಇವರ ಪ್ರೀತಿಗೂ ಧಾರಾವಾಹಿಯೇ ಕಾರಣ. ಅದೇ ಸೆಟ್ ನಲ್ಲಿ ಪರಿಚಯವಾಗಿತ್ತು.
ಸಿಲ್ಲಿ ಲಲ್ಲಿಯಲ್ಲಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದ ರೂಪಾ ಮತ್ತು ಪ್ರಶಾಂತ್ ಲವ್ ಮಾಡಿ ಮದುವೆ ಆಗಿದ್ದಾರೆ. ಇವರಿಗೆ ಒಬ್ಬ ಮಗನಿದ್ದಾನೆ. ಧಾರಾವಾಹಿ ಮೂಲಕವೇ ಇವರಿಗೂ ಸ್ನೇಹ ಹುಟ್ಟಿತ್ತು.
ಬಿಗ್ ಬಾಸ್ ಸೀಸನ್ 05 ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅಲ್ಲಿ ಸ್ನೇಹಿತರಾಗಿದ್ದರು. ಆಚೆ ಬಂದ ಮೇಲೆ ಇಬ್ಬರು ಪ್ರೀತಿ ಮಾಡಿ ಮದುವೆ ಆಗಿದ್ದಾರೆ.
ಐಶ್ವರ್ಯಾ ಮತ್ತು ವಿನಯ್ ಅವರ ಪರಿಚಯ ಸಹ ಧಾರಾವಾಹಿ ಮೂಲಕವೇ ಆಯಿತಂತೆ. ಅಲ್ಲಿಂದ ಸ್ನೇಹ ಬೆಳೆದು ಪ್ರೀತಿಯಾಗಿ ಮದುವೆ ಆಗಿದ್ದರು. ಕಳೆದ ಬಾರಿ ರಾಜಾ ರಾಣಿ ಸೀಸನ್ಗೆ ಬಂದಿದ್ದರು.
ಮಹಾಸತಿ ಸೀರಿಯಲ್ ಮೂಲಕ ಪರಿಚಯವಾದ ಸಾಗರ್ ಪುರಾಣಿಕ್ ಮತ್ತು ದೀಪಾ ಜಗದೀಶ್ ಪ್ರೀತಿಸಿ ಮದುವೆ ಆಗಿದ್ದರು. 10 ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದರು.
https://play.google.com/store/apps/details?id=com.speed.newskannada