ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ಸುಳಿವು ಬಿಟ್ಟುಕೊಟ್ಟ ಸಚಿವ ನಾರಾಯಣ ಗೌಡ!

ನಮ್ ಜತೆ ಹಲವರು ಸಂಪರ್ಕದಲ್ಲಿ ಇದ್ದಾರೆ.ಹಲವರು ನಮ್ಮ ಪಕ್ಷ ಸೇರ್ಪಡೆ ಆಗ್ತಾರೆ. ಯಾರೆಲ್ಲ ಬರ್ತಾರೆ, ಎಷ್ಟು ಜನ ಬರ್ತಾರೆ ಅಂತ ನಾನು ಈ ಹಂತದಲ್ಲಿ ಹೇಳಲ್ಲ

ನಮ್ಮ ಪಕ್ಷ 140 ರಿಂದ 150 ಸ್ಥಾನ ಗೆದ್ದೇಗೆಲ್ಲುತ್ತೆ ಮಂಡ್ಯದಲ್ಲಿ ಮುಂದಿನ‌ ಚುನಾವಣೆಯಲ್ಲಿ 4 ರಿಂದ 5 ಶಾಸಕರನ್ನು ಗೆಲ್ಲಿಸ್ತೇವೆ,ಮಂಡ್ಯದಲ್ಲಿ ‌ಮುಂದಿನ ಸಲ ಒಬ್ಬರು ಸಂಸದರನ್ನು ಗೆಲ್ಲಿಸ್ತೇವೆ

ಸಚಿವ ನಾರಾಯಣ ಗೌಡ ಹೇಳಿಕೆ ,ಸಚಿವ ನಾರಾಯಣಗೌಡ ಸುದ್ದಿಗೋಷ್ಟಿ.ಒಡಿಸ್ಸಾದಲ್ಲಿ ಮೊದಲನೇ ಖೇಲೋ ಇಂಡಿಯಾ ಆಗಿತ್ತು.ಎರಡನೇ ಖೇಲೋ ಇಂಡಿಯಾ ಕರ್ನಾಟಕದಲ್ಲಿ ಆಗಿದೆ.ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಉದ್ಘಾಟನೆ ಮಾಡಿದ್ರು.

ಭಾರತದ ಕ್ರೀಡೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು ಅನ್ನೋದು ಪ್ರಧಾನಿ ಮೋದಿಯವರ ಕನಸು.ಖೇಲೋ ಇಂಡಿಯಾದಲ್ಲಿ 8ಸಾವಿರ ಜನ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.ಖೇಲ್ ಗೆ ಭಾರತ ಹಾಗೂ ಕರ್ನಾಟಕ ಸೇರಿ ಮಾಡ್ತಿದ್ದೇವೆ.

ಮೋದಿಯವರ ಕನಸಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಕರ್ನಾಟಕ ಸರ್ಕಾರ ಹೆಚ್ಚು ಒತ್ತನ್ನ ನೀಡಿದೆ.ಕಳೆದ ನಾಲ್ಕೈದು ವರ್ಷದಿಂದ ಜಕ್ಕೂರು ಏರೋ ಡ್ರಮ್‌ನಲ್ಲಿ ನೂರು ಜನ ಪೈಲೆಟ್ ಮಾಡುವ ಕೆಲಸ ನಡೆಯುತ್ತಿದೆ.ಹೀಗಾಗಿ ಲಘು ವಿಮಾನ ಖರೀದಿ ಮಾಡಿದ್ದೇವೆ.

ಬಡ ಹಾಗೂ ಹಿಂದುಳಿದ ಮಕ್ಕಳು ಪೈಲಟ್ ಆಗಬೇಕು ಅಂತ ಮಾಡಿ ಸಕ್ಸಸ್ ಕೂಡ ಆಗಿದೆ.504 ಕೋಟಿ ಅನುಧಾನದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆಟದ ಮೈದಾನ ಮಾಡಲಾಗ್ತಿದೆ.

ಪ್ರತೀ ಶಾಲೆಯಲ್ಲಿ ಮಕ್ಕಳಿಗೆ ಒಂದುವರೆ ಗಂಟೆಗಳ ಕಾಲ ಆಟ ಆಡಿಸುವಂತೆ ಸೂಚನೆ ನೀಡಿದ್ದೇವೆ.ಗ್ರಾಮೀಣ ಭಾಗದ 25ಮಕ್ಕಳನ್ನ ಗುರ್ತಿಸಿ, ಮದ್ರಾಸ್ ಹಾಗೂ ಆಂಧ್ರದಲ್ಲಿ ಆಟವಾಡಿ ಚಿನ್ನ ಗೆದ್ದಿದ್ದಾರೆ.

ಒಂದೇ ತಿಂಗಳ ಕೋಚಿಂಗ್‌ನಿಂದ ಚಿನ್ನ ಗೆದ್ದಿದ್ದಾರೆ.ನಮ್ಮ ಕರ್ನಾಟಕದಲ್ಲಿ ಸ್ಪೋರ್ಟ್ಸ್ ವಿವಿ ಇರಲಿಲ್ಲ.ಯಲಹಂಕದಲ್ಲಿ ನೂರು ಎಕರೆ ಜಾಗ ಗುರ್ತಿಸಿ, ಯೂನಿವರ್ಸಿಟಿ ಮಾಡಲು ನಿರ್ಧಾರ.

ಹಳೆಯ ಕುಸ್ತಿ ಪಟುಗಳಿಗೆ ಒಂದು ಸಾವಿರ ಮಾಸಾಶನ ಹೆಚ್ಚಿಸಿದ್ದೇವೆ.ಗರಡಿ ಮನೆ ನಿಂತುಹೋಗಿದ್ದು, ಹಳೇ ಮೈಸೂರು ಭಾಗದಲ್ಲಿ ಗರಡಿ ಮನೆ ಮಾಡಿಕೊಟ್ಟಿದ್ದೇವೆ.

ಕಂಠೀರವ ಸ್ಟೇಡಿಯಂನಲ್ಲಿ ಸಿಂಥೆಟಿಕ್ ಟ್ರಾಕ್ ಮಾಡಿದ್ದೇವೆ.ತುಮಕೂರು,ಮಂಡ್ಯದಲ್ಲಿ, ಬೆಂಗಳೂರಿನಲ್ಲಿ ಟೆಸ್ಟಿಂಗ್ ಟ್ರಾಕ್ ಮಾಡಿದ್ದೇವೆ.

ಹೆಣ್ಣುಮಕ್ಕಳಿಗೆ ಹಾಸ್ಟೆಲ್ ಮಾಡಲು ನಿರ್ಧರಿಸಿ, ಒಂದು ವರ್ಷದಲ್ಲಿ ಮೂವತ್ತು ಕಡೆ ಹಾಸ್ಟೆಲ್ ನಿರ್ಮಾಣ ಮಾಡಿದ್ದೇವೆ.ಸ್ವಿಮ್ಮಿಂಗ್ ಪೂಲ್ ನೆನೆಗುದಿಗೆ ಬಿದ್ದಿದ್ದು, ಅದನ್ನ ಮತ್ತೆ ಕಾರ್ಯ ಮಾಡುವಂತೆ ಕೆಲಸ ಮಾಡಲಾಗಿದೆ.31ಜಿಲ್ಲೆಗಳ ಪೈಕಿ, 28ಕಡೆ ಕೆಲಸ ಮಾಡಿದ್ದೇವೆ.ಇನ್ನೂ ಕೆಲಸ ಮಾಡುವುದು ಸಾಕಷ್ಟಿದೆ.ಡಾ. ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಯೂತ್ ಪಾಲಿಸಿ ತಂದು, ಆಯ್ಕೆ ಮಾಡಿ ಸೆಂಟ್ರಲ್ಲಿಗೆ ಕಳಿಸಲಾಗ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಪಡಸಲಗಿ ಗ್ರಾಮದಲ್ಲಿ ಹಾಲೋಕುಳಿ ಸಂಭ್ರಮ!

Tue Apr 26 , 2022
ಮೈನವಿರೇಳಿಸುವ ಸಾಹಸಕ್ಕೆ ಕೇಕೆ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆ.55 ಅಡಿ ಎತ್ತರದ ಜಾರುವ ಕಂಬ ಏರುವ ಸಾಹಸ. Casino online security methods feature the latest and https://clanchronicles.com/tiki-themed-casino-hotels-in-las-vegas/ only re Read More ». ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮ.ಗ್ರಾಮದ ಮಾರುತೇಶ್ವರ ಜಾತ್ರೆ ನಿಮಿತ್ಯ ನಡೆದ ಹಾಲೋಕುಳಿ.55 ಅಡಿ ಎತ್ತರದ ಕಂಬವನ್ನು ಸುಲಭವಾಗಿ ಹತ್ತದಂತೆ. Rich casino with a grin he climbs into […]

Advertisement

Wordpress Social Share Plugin powered by Ultimatelysocial