ಊರ ಜಾತ್ರೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ನಡೆದ ಊರ ಜಾತ್ರೆಯಲ್ಲಿ ಪಾಲ್ಗೊಂಡು ಜನರೊಂದಿಗೆ ಕುಣಿದಿದ್ದಾರೆ.

ಸಿದ್ಧರಾಮೇಶ್ವರ, ಚಿಕ್ಕತಾಯಮ್ಮ ಜಾತ್ರೆ ನಡೆದಿದ್ದು, ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು ಬೆಂಬಲಿಗರೊಂದಿಗೆ ಕುಣಿದ ಸಿದ್ದರಾಮಯ್ಯ ಅವರು ಸಿದ್ದರಾಮೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಜಾತ್ರೆಯಲ್ಲಿ ಹೆಚ್ಚಿನ ಜನ ಸೇರಿದ್ದು, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗ್ರಾಮಸ್ಥರು ಘೋಷಣೆ ಕೂಗಿದ್ದಾರೆ. ಬೆಂಬಲಿಗರೊಂದಿಗೆ ಸಿದ್ದರಾಮಯ್ಯ ಹೆಜ್ಜೆ ಹಾಕಿದ್ದನ್ನು ಕಂಡ ಅವರ ಪುತ್ರ, ಶಾಸಕ ಡಾ. ಯತಿಂದ್ರ ಖುಷಿಪಟ್ಟಿದ್ದು, ಜನ ಕುಣಿಯುವವರನ್ನು ನೋಡಿ ಉತ್ಸಾಹದಿಂದ ತಂದೆಯವರು ಡ್ಯಾನ್ಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಾನು ಊರ ಜಾತ್ರೆಗೆ ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಕೊರೋನಾ ಕಾರಣದಿಂದ ಕಳೆದ ವರ್ಷ ಜಾತ್ರೆ ಮಾಡಿರಲಿಲ್ಲ. ಊರ ಜಾತ್ರೆಗೆ ನೆಂಟರಿಷ್ಟರು, ಬಂಧುಗಳು ಬಂದಿರುತ್ತಾರೆ. ಜನ ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಊರಿಗೆ ಬಂದು ಹೋಗುವುದೇ ನಮಗೆ ಖುಷಿ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಮ್ ಜಾಂಗ್ ಉನ್ 'ವೈಯಕ್ತಿಕವಾಗಿ ಆದೇಶ' ಕ್ಷಿಪಣಿ ಪರೀಕ್ಷೆ!

Fri Mar 25 , 2022
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ದೇಶದ “ಹೊಸ ಮಾದರಿಯ” ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಗುಂಡಿನ ದಾಳಿಗೆ ವೈಯಕ್ತಿಕವಾಗಿ ಆದೇಶ ನೀಡಿದ್ದಾರೆ ಎಂದು ರಾಜ್ಯ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. “ಡಿಪಿಆರ್‌ಕೆ ಸ್ಟ್ರಾಟೆಜಿಕ್ ಫೋರ್ಸ್‌ನ ಹೊಸ ರೀತಿಯ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಹ್ವಾಸಾಂಗ್‌ಫೋ-17 ನ ಪರೀಕ್ಷಾ-ಉಡಾವಣೆಯನ್ನು ಮಾರ್ಚ್ 24 ರಂದು ನಡೆಸಲಾಯಿತು… ಕಿಮ್ ಜಾಂಗ್ ಉನ್ ಅವರ ನೇರ ಮಾರ್ಗದರ್ಶನದಲ್ಲಿ,” ಕೆಸಿಎನ್‌ಎ ಹೇಳಿದೆ. “ಪ್ಯೋಂಗ್ಯಾಂಗ್ ಅಂತರಾಷ್ಟ್ರೀಯ ವಿಮಾನ […]

Advertisement

Wordpress Social Share Plugin powered by Ultimatelysocial