ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಮುಖಂಡ ಹಾಸನ ಜಿಲ್ಲೆಯ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣನವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಜೆಡಿಎಸ್ ಪಕ್ಷದ ವತಿಯಿಂದ ಕ್ರೇನ್ ಮೂಲಕ ಹೂವಿನ ಹಾರವನ್ನು ಹಾಕಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿದಂತಹ ಪ್ರಜ್ವಲ್ ರೇವಣ್ಣ ರಮೇಶ್ ಕುಮಾರ್ ಮಾತುಗಳನ್ನು ಯಾರು ನಂಬಬೇಡಿ ಅವರು ಹೇಳುವುದೇ ಒಂದು ಮಾಡುವುದೇ ಒಂದು ಶುದ್ಧ ಕುಡಿಯುವ ನೀರನ್ನು ಕೊಡುತ್ತೇವೆಂದು ಕೊಳಚೆ ನೀರನ್ನು ತಂದುಕೊಟ್ಟರು ಕೋಲಾರಕ್ಕೆ ಸಿದ್ದರಾಮಯ್ಯ ಬಂದರೆ ಅಭಿವೃದ್ಧಿಯಾಗುತ್ತದೆಂದು ಶಾಸಕ ರಮೇಶ್ ಕುಮಾರ್ ಹೇಳುತ್ತಾರೆ ತಾವು ಎರಡು ಬಾರಿ ಶಾಸಕರಾಗಿದ್ದೀರಾ ಸಚಿವರಾಗಿದ್ದೀರಾ ಸಿದ್ದರಾಮಯ್ಯ ಬಂದರೆ ಅಭಿವೃದ್ಧಿಯಾಗುವುದಾದರೆ ತಾವು 10 ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಾ ಎಂದು ಶಾಸಕ ರಮೇಶ್ ಕುಮಾರ್ ಅವರನ್ನು ಪ್ರಜ್ವಲ್ ರೇವಣ್ಣ ಪ್ರಶ್ನಿಸಿ ಬಿಜೆಪಿ ಹಾಗೂ ಕಾಂಗ್ರೆಸ್ನವರಿಗೆ ಹಸಿರು ಶಾಲು ಚುನಾವಣಾ ಸಂದರ್ಭದಲ್ಲಿ ಕಾಣಿಸುವುದು ಹೊರತುಪಡಿಸಿದರೆ ಉಳಿದ ಸಮಯದಲ್ಲಿ ರೈತರಾಗಳಿ, ಹಸಿರು ಶಾಲು ಆಗಲಿ ನೆನಪಾಗುವುದಿಲ್ಲ ಎರಡು ಪಕ್ಷಗಳ ನಾಯಕರು ಈಗಾಗಲೇ ಚುನಾವಣಾ ಪ್ರಚಾರಗಳನ್ನು ಕೈಗೊಂಡಿದ್ದಾರೆ ರೈತರಿಗೆ ಯಾವುದೇ ಭರವಸೆಗಳನ್ನು ಮಾತ್ರ ನೀಡುತ್ತಿಲ್ಲ ಆದರೆ ರೈತರಿಗೆ ಭರವಸೆಗಳನ್ನು ನೀಡುತ್ತಿರುವದು ಮುಖ್ಯಮಂತ್ರಿಗಳಾದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡಿರುವುದು ಮುಂದೆ ಅಧಿಕಾರಿಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ತರುವ ಬಗ್ಗೆ ಭರವಸೆ ನೀಡುತ್ತಿರುವ ಏಕೈಕ ಪಕ್ಷ ಅಥವಾ ಏಕೈಕ ವ್ಯಕ್ತಿಯಂದರೆ ಅದು ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಮಾತ್ರವೆಂದರು.
https://play.google.com/store/apps/details?id=com.speed.newskannada