ಸ್ನೇಹಿತನನ್ನು ಕೊಂದು ಘಾಟ್‌ನಿಂದ ಎಸೆಯುವಾಗ ಕಾಲು ಜಾರಿ ಬಿದ್ದು ಆರೋಪಿ ಸಾವು.

ಹಾರಾಷ್ಟ್ರ: ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತನನ್ನು ಕೊಲೆ ಮಾಡಿದ 30 ವರ್ಷದ ವ್ಯಕ್ತಿಯೊಬ್ಬ ಶವವನ್ನು ಘಾಟ್‌ನಿಂದ ಎಸೆಯಲು ಹೋಗಿ ಕಾಲು ಜಾರಿ ತಾನೂ ಸಾವನ್ನಪ್ಪಿದ ವಿಪರ್ಯಾಸ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆದ್ರೆ, ಮೃತ ದೇಹವನ್ನು ಎಸೆಯಲು ವ್ಯಕ್ತಿಗೆ ಸಹಾಯ ಮಾಡುತ್ತಿದ್ದ ಸಹಾಯಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ.

ಕೊಲ್ಲಾಪುರದಿಂದ ಸಾವಂತವಾಡಿಯ ಅಂಬೋಲಿ ಘಾಟ್‌ನಲ್ಲಿ ಈ ಘಟನೆ ನಡೆದಿದೆ.

ಭೌಸೋ ಮಾನೆ ಎಂಬ 30 ವರ್ಷದ ವ್ಯಕ್ತಿ ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತ ಸುಶಾಂತ್ ಖಿಲ್ಲರೆ (30) ಎಂಬಾತನನ್ನು ಭಾನುವಾರ ಕೊಂದಿದ್ದಾನೆ. ನಂತ್ರ, ಕೊಲೆ ಪ್ರಕರಣ ಮುಚ್ಚಿಹಾಕಲು ಅಂಬೋಲಿ ಘಾಟ್‌ನಲ್ಲಿ ಎಸೆಯಲು ಪ್ಲಾನ್‌ ಮಾಡಿದ್ದನು. ಅದರಂತೇ, ಸುಶಾಂತ್ ಶವವನ್ನು ಎಸೆಯಲು ತುಷಾರ್ ಪವಾರ್ (28) ಎಂಬಾತನ ಜೊತೆ ಸೇರಿ ಕಾರಿನಲ್ಲಿ ಅಂಬೋಲಿ ಘಾಟ್‌ಗೆ 400 ಕಿಮೀ ಪ್ರಯಾಣಿಸಿದರು.

ಅಲ್ಲಿ ಸುಶಾಂತ್‌ನ ಮೃತದೇಹವನ್ನು ಎಸೆಯುವಾಗ ಭೌಸೋ ಕಾಲು ಜಾರಿ ಬಿದ್ದು ತಾನೂ ಸಾವನ್ನಪ್ಪಿದ್ದನೆ. ಆದ್ರೆ, ಪವಾರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಮೂವರೂ ಸತಾರಾದ ಕರಡ್ ನಿವಾಸಿಗಳು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನ ಮಾರತ್ತಹಳ್ಳಿ ಬಳಿಯ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆ ಅಂಡರ್‌ಪಾಸ್ ಸಿದ್ಧ.

Sat Feb 4 , 2023
ಬೆಂಗಳೂರು, ಫೆಬ್ರವರಿ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಕೇವಲ 58 ದಿನಗಳಲ್ಲಿ ಬೆಂಗಳೂರಿನ ಮಾರತ್ತಹಳ್ಳಿ ಬಳಿ ಇರುವ ಮುನ್ನೆಕೊಲ್ಲಾಲ ರೈಲ್ವೆ ಮೇಲ್ಸೇತುವೆಯ ಪುಷ್ ಬಾಕ್ಸ್ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದೆ. ಈ ಕೆಳಸೇತುವೆಯು ಹಳೆಯ ವಿಮಾನ ನಿಲ್ದಾಣ ರಸ್ತೆಯಿಂದ ಹೊರವರ್ತುಲ ರಸ್ತೆ (ORR) ಮೂಲಕ ಸರ್ಜಾಪುರ ರಸ್ತೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಎರಡು ತಿಂಗಳೊಳಗೆ ಪ್ರಿಫ್ಯಾಬ್ರಿಕೇಟೆಡ್ ಪುಶ್ ಬಾಕ್ಸ್ ಅಂಡರ್‌ಪಾಸ್‌ನಲ್ಲಿ ಇಷ್ಟು ವೇಗದ ಗತಿಯ ಕೆಲಸಕ್ಕಾಗಿ, ಬಿಬಿಎಂಪಿ […]

Advertisement

Wordpress Social Share Plugin powered by Ultimatelysocial