ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರಿ ಯೋಜನೆ ಕೆಲಸವನ್ನ ನಂಬಿ ಜೀವನ ಮಾಡುತ್ತಿರುವ ಬಡ ಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ. ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳುಚಿಕ್ಕಬಾಗೇವಾಡಿ ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆ ನಂಬಿ ಜೀವನ ಮಾಡುತ್ತಿರುವ ಕಾರ್ಮಿಕರನ್ನ ಕಡೆಗಣಿಸಿದರು. ನೀವು ಕೆಲಸ ಮಾಡಬೇಡಿ ಎಂದು ಕೆಲಸಕ್ಕೆ ಹೋಗಿದ್ದ ಕಾರ್ಮಿಕರನ್ನ ವಾಪಸ್ಸ ಕರೆಸಿದ್ದಾರೆ ಎಂದು ಅಕ್ರೋಶ ಹೊರಹಾಕಿದರು. ಎನ್ ಎಮ್ ಆರ್ ಹಾಕಿದ ಮೇಲೆ ಕೆಲಸಕ್ಕೆ ಹೋದ ಕಾರ್ಮಿಕರಿಗೆ ಕೆಲಸ ಮಾಡಬೇಡಿ ಎಂದು ವಾಪಸ್ಸ ಮನೆಗೆ ಕಳಸಿದ್ದಾರೆಂದು ಕಾರ್ಮಿಕರು ಇವತ್ತು ಗ್ರಾಮ ಪಂಚಾಯತಿ ಮುಂದೆ ಅಧಿಕಾರಿಗಳ ವಿರುದ್ದ ಅಕ್ರೋಶ ಹೊರಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada