ಭಾರತಿ ಶೆಟ್ಟಿ, ಮೊದಲು ಜಮೀರ್ ಅವರು ಅವರ ಧರ್ಮದ ಗಂಡಸರಿಗೆ ಬುದ್ಧಿ ಕಲಿಸಲಿ ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರು:ಶಾಸಕ ಜಮೀರ್ ಅಹಮದ್ ಖಾನ್ ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಮೊದಲು ಜಮೀರ್ ಅವರು ಅವರ ಧರ್ಮದ ಗಂಡಸರಿಗೆ ಬುದ್ಧಿ ಕಲಿಸಲಿ ಎಂದು ತಿರುಗೇಟು ನೀಡಿದ್ದಾರೆ.ವಿವಾದದ ಸ್ವರೂಪ ಪಡೆಯುತ್ತಿರುವ ಜಮೀರ್ ಅಹಮದ್ ಅವರ ಹೇಳಿಕೆಗೆ ಗರಂ ಆದ ಭಾರತಿ ಶೆಟ್ಟಿ, ಸೌಂದರ್ಯದ ವಿಚಾರದಲ್ಲಿ ನೋಡುವ ದೃಷ್ಟಿ ಮೊದಲು ಸರಿ ಆಗಬೇಕು. ಜಮೀರ್ ಅಹಮದ್ ಖಾನ್ ಕುಟುಂಬದಲ್ಲಿ ಯಾವ ಯಾವ ಸಂಬಂಧಗಳು ಹೇಗೆ ಇರುತ್ತವೆ ಎನ್ನೋದು ಗೊತ್ತಿಲ್ಲ.ನಾವು ಹಿಂದೂ ಸಂಪ್ರದಾಯದಲ್ಲಿ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತೇವೆ. ಅಣ್ಣ, ತಂಗಿ, ಅಕ್ಕ, ತಮ್ಮ, ಗಂಡ ಅನ್ನೋ ಸಂಬಂಧಗಳ ಮಧ್ಯೆ ನಾವು ಬೆಳೆಯುತ್ತೇವೆ. ಮೊದಲು ಜಮೀರ್ ಅವರು ಅವರ ಧರ್ಮದ ಗಂಡಸರಿಗೆ ಬುದ್ದಿ ಕಲಿಸಲಿ ಎಂದು ಹೇಳಿದರು.ಜಿಹಾದ್ ಹೆಸರಲ್ಲಿ ಕೆಟ್ಟ ದೃಷ್ಟಿಯಿಂದ ನೋಡುವ ಗಂಡಸರ ಕಣ್ಣು ಕೀಳಬೇಕು. ಮೊದಲು ಇದನ್ನು ಜಮೀರ್ ಸರಿ ಮಾಡಲಿ. ಜಿಹಾದ್ ಹೆಸರಲ್ಲಿ ಬೇರೆ ಧರ್ಮದ ಹೆಣ್ಣು ಮಕ್ಕಳನ್ನು ಕೆಟ್ಟ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಹಿಜಾಬ್ ಘಟನೆ ಹಿಂದೆ ದೊಡ್ಡ ನೆಟವರ್ಕ್ ಕೆಲಸ ಮಾಡುತ್ತಿದೆ ಎನಿಸುತ್ತದೆ ಎಂದರು.ಅಂತರಾಷ್ಟ್ರೀಯ ಮಟ್ಟಕ್ಕೆ ಇದನ್ನು ತೆಗೆದುಕೊಂಡು ಹೋಗಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ನಾವು 40 ವರ್ಷದ ಹಿಂದೆ ಎಜುಕೇಶನ್ ಮಾಡುವಾಗ ಯಾವ ಹಿಜಾಬೂ ಇರಲಿಲ್ಲ ಏನೂ ಇರಲಿಲ್ಲ. ಈಗ ಇಷ್ಡು ದೊಡ್ಡ ಮಟ್ಟದ ಸುದ್ದಿ ಮಾಡ್ತಿದ್ದಾರೆ. ಇದರ ಹಿಂದೆ ದೊಡ್ಡ ನೆಟವರ್ಕ್ ಕೆಲಸ ಮಾಡ್ತಿದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಕಪ್ಪು ತುಟಿಗಳಿಂದ ಬೇಸತ್ತಿದೆ! ಅವುಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುವ ಆಹಾರಗಳು ಇಲ್ಲಿವೆ

Mon Feb 14 , 2022
  ನಿಮ್ಮ ತುಟಿಗಳು ಇದ್ದಕ್ಕಿದ್ದ ಹಾಗೆ ಗುಲಾಬಿಯಾಗಿಲ್ಲ ಮತ್ತು ದಿನದಿಂದ ದಿನಕ್ಕೆ ಕಪ್ಪಾಗುತ್ತಿವೆ ಎಂದು ನೀವು ಆಶ್ಚರ್ಯ ಪಡುತ್ತೀರಾ? ಸರಿ, ಚಿಂತಿಸಬೇಡಿ ನೀವು ಒಬ್ಬಂಟಿಯಾಗಿಲ್ಲ. ಇದು ಆನುವಂಶಿಕವಲ್ಲದಿದ್ದರೆ, ಅನೇಕ ಆರೋಗ್ಯ, ಆಹಾರ ಮತ್ತು ಜೀವನಶೈಲಿಯ ಅಂಶಗಳು ನಿಮ್ಮ ತುಟಿಗಳನ್ನು ಕಪ್ಪಾಗಿಸಬಹುದು. ನೀವು ಧೂಮಪಾನ ಮಾಡುತ್ತಿದ್ದರೆ, ನೀವು ಧೂಮಪಾನ ಮಾಡದ ಸ್ನೇಹಿತರಿಗಿಂತ ಗಾಢವಾದ ತುಟಿಗಳನ್ನು ಹೊಂದಿರಬಹುದು. ಕೆಲವೊಮ್ಮೆ, ಸೌಂದರ್ಯವರ್ಧಕಗಳು ನಿಮ್ಮ ತುಟಿಗಳನ್ನು ಕಪ್ಪಾಗಿಸುವ ರಾಸಾಯನಿಕಗಳನ್ನು ಸಹ ಹೊಂದಿರಬಹುದು. ವಿಟಮಿನ್ ಕೊರತೆಯು ತುಟಿಗಳ […]

Advertisement

Wordpress Social Share Plugin powered by Ultimatelysocial