ತಿರುವನಂತಪುರಂ: ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂದ್ರೆ ಜನ ಈ ಬಗ್ಗೆ ಹೆಚ್ಚು ಗಮನ ಕೊಡ್ತಿಲ್ಲ. ಹೀಗಾಗಿ ಕೇರಳದ ತನ್ನೀರ್ ಮುಕ್ಕೋಮ್ ಅನ್ನೋ ಗ್ರಾಮದಲ್ಲಿ ಮನೆಯಿಂದ ಯಾರೇ ಹೊರಬಂದ್ರೂ ಕೊಡೆಯೊಂದನ್ನ ಹಿಡಿದುಕೊಂಡೇ ಬರೋದನ್ನ ಕಡ್ಡಾಯಗೊಳಿಸಿದೆ. ಈ ಮೂಲಕ ಗ್ರಾಮದಲ್ಲಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಲು ಪ್ಲಾನ್ ಮಾಡಲಾಗಿದೆ. ಇದರ ಫೋಟೋವನ್ನ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೊಡೆಗಳನ್ನ ಸಬ್ಸಿಡಿ ದರದಲ್ಲಿ ನೀಡಲಾಗಿದೆ ಅಂತ ತಿಳಿಸಿದ್ದಾರೆ.
ಯಾರೇ ಹೊರ ಬಂದ್ರು ಕೊಡೆ ಹಿಡಕೊಂಡೆ ಬರಬೇಕು
Please follow and like us: