ರಾಜ್ಯದಲ್ಲಿ ಸದ್ದಿಲ್ಲದೇ ನಡೀತಿದ್ಯಾ ಮೆಗಾ ಆಪರೇಷನ್ ರಾಜಕೀಯ..?
ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮತ್ತೊಂದು ಮೆಗಾ ಆಪರೇಷನ್ ರಾಜಕೀಯ ನಡೆಯೋ ಸಾಧ್ಯತೆ ಇದೆ. ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಹಲವು ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರೋದು ಪಕ್ಕಾ ಅನ್ನೋ ಮಾತನಾಡಿದ್ರು. ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದ ಬಿಜೆಪಿ ನಾಯಕರು ನೋ ಚಾನ್ಸ್ ಸಾಧ್ಯವೇ ಇಲ್ಲ. ನಮ್ಮ ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗಲ್ಲ ಎಂದು ಹೇಳುತ್ತಿದ್ದಾರೆ. ಈ ರಾಜಕೀಯ ಹಗ್ಗ-ಜಗ್ಗಾಟದ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಸದ್ದಿಲ್ಲದೇ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟಂತೆ ಕಾಣುತ್ತಿದೆ.
ಯಾರು, ಯಾರ ಸಂಪರ್ಕದಲ್ಲಿದ್ದಾರೆ ನೋಡೋಣ ಎನ್ನುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರನ್ನು ಡೈರೆಕ್ಟಾಗಿ ಟಚ್ ಮಾಡಿದ್ದಾರೆ. ಇತ್ತೀಚೆಗೆ ಖುದ್ದು ಡಿಸಿಎಂ ಬಿಜೆಪಿ ಮಾಜಿ ಶಾಸಕರ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಆಪರೇಷನ್ ಹಸ್ತ ಬಿಸಿ, ಬಿಸಿ ಚರ್ಚೆ ಆಗುತ್ತಿರುವಾಗಲೇ ಡಿ.ಕೆ ಶಿವಕುಮಾರ್ ಜೊತೆ ಬಿಜೆಪಿ ನಾಯಕರು ಕಾಣಿಸಿಕೊಂಡಿರೋದು ಕುತೂಹಲ ಕೆರಳಿಸಿದೆ. ಈ ಕುರಿತ ಮಹತ್ವದ ಫೋಟೋಗಳು ಬಿಡುಗಡೆಯಾಗಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಬಿಜೆಪಿ ನಾಯಕರು ರಹಸ್ಯ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವ ಬಿ.ಸಿ ಪಾಟೀಲ್, ಮಾಜಿ ಶಾಸಕ ರಾಜುಗೌಡ ಡಿಕೆಶಿ ಜೊತೆ ಆತ್ಮೀಯವಾಗಿ ಮಾತನಾಡಿರೋ ಫೋಟೋ ಇದೀಗ ಬಯಲಾಗಿದೆ. ಅಂದ ಹಾಗೆ ಈ ಸೆನ್ಸೇಷನ್ ಫೋಟೋ ತೆಗೆದಿರೋದು