ಅಮೇರಿಕಾ ಅಧ್ಯಕ್ಷ  ಗೌಪ್ಯ ಬಂಕೆರ್ ಗೆ ರವಾನೆ

 ಅಮೇರಿಕಾ: ಶ್ವೇತ ಭವನದ ಹೊರಗೆ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂಕ್ಷಿಪ್ತವಾಗಿ ಗೌಪ್ಯ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಯಿತು. ಜಾರ್ಜ್ ಫ್ಲಾಯ್ಡ್ ಸಾವಿನ ಕುರಿತಾದ ಪ್ರತಿಭಟನೆಗಳು ಶುಕ್ರವಾರ ರಾತ್ರಿ ರಾಷ್ಟ್ರದ ರಾಜಧಾನಿಯನ್ನು ಅಪ್ಪಳಿಸಿದಾಗ ಕೋಪಗೊಂಡ ಪ್ರತಿಭಟನಾಕಾರರು ಪೆನ್ಸಿಲ್ವೇನಿಯಾ ಅವೆನ್ಯೂಗೆ ಆಗಮಿಸಿದರು. ಇದು ಶ್ವೇತಭವನದಲ್ಲಿ ಲಾಕ್ಡೌನ್ ಮಾಡಲು ಕಾರಣವಾಯಿತು. ಶುಕ್ರವಾರ ಶ್ವೇತಭವನದ ಹೊರಗೆ, ಸಂಜೆ 7 ಗಂಟೆಯ ನಂತರ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಕನಿಷ್ಠ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ .  ಕೆಲವು ದೊಡ್ಡ ಧ್ವಜಗಳು ಮತ್ತು ಬ್ಯಾರಿಕೇಡ್‌ಗಳನ್ನು ಬಡಿದು ಪ್ರತಿಭಟನಾಕಾರರ ದೊಡ್ಡ ಗುಂಪೊಂದು  ಶ್ವೇತ ಭವನದ ಕಡೆ ಧಾವಿಸಿದೆ ಜೊತೆಗೆ ಕೆಲವು ಹಿಂಸಾತ್ಮಕ ಮುಖಾಮುಖಿ ಗಲಾಟೆ  ನಡೆದಿದೆ . ರಾಷ್ಟ್ರಾಧ್ಯಕ್ಷ ಟ್ರಂಪ್  ಅಪಾಯವಿಲ್ಲದಿದ್ದರು ಅಧಿಕಾರಿಗಳು ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಸಮಯಕ್ಕೆ ಸರಿಯಾಗಿ ಬಂಕರ್‌ಗೆ ಸ್ಥಳಾಂತರಿಸುವ ಮುನ್ನೆಚ್ಚರಿಕೆ ವಹಿಸಿದರು.  ಪ್ರತಿಭಟನೆಯಿಂದ ಟ್ರಂಪ್ ಮತ್ತು ಅವರ ಕುಟುಂಬ ತುಂಬಾ ಬೆಚ್ಚಿಬಿದ್ದಿದೆ ಎಂದು ವರದಿಗಳು ತಿಳಿಸವೆ.  ಜಾರ್ಜ್ ಫ್ಲಾಯ್ಡ್ ಎಂಬ ನಿರಾಯುಧ (unarmed) ಕಪ್ಪು ಅಲ್ಪಸಂಖ್ಯಾತ ವ್ಯಕ್ತಿಯೋರ್ವ ಈ ವಾರ ಮಿನ್ನಿಯಾಪೋಲಿಸ್ ಪೊಲೀಸ್ ಕಸ್ಟಡಿಯಲ್ಲಿ, ಡೆರೆಕ್ ಚೌವಿನ್ ಎಂಬ ಬಿಳಿ ಅಧಿಕಾರಿಯೊಬ್ಬರು ಫ್ಲಾಯ್ಡ್ ನ ಕುತಿಗೆಗೆ ಮೊಣಕಾಲನೂರಿ ನೆಲಕ್ಕೆ ಹಾಕಿ ತುಳಿದ ನಂತರ ಮೃತಪಟ್ಟರು .  ಅವರ ಸಾವು ಯುನೈಟೆಡ್ ಸ್ಟೇಟ್ಸ್ನ ನಗರಗಳಲ್ಲಿ ಪೊಲೀಸ್ ಕ್ರೌರ್ಯ ಮತ್ತು ಜನಾಂಗೀಯ ತಾರತಮ್ಯದ ವಿರುದ್ಧ ಪ್ರದರ್ಶನಗಳನ್ನು ಹುಟ್ಟುಹಾಕಿದೆ.

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಅಚ್ಚರಿಪಡಬೇಕಿಲ್ಲ

Mon Jun 1 , 2020
ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದರೂ ಅಚ್ಚರಿಪಡಬೇಕಿಲ್ಲ, ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಾರ್ಮಿಕವಾಗಿ ನುಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಯಾವ ಘಟ್ಟಕ್ಕೆ ಬೇಕಾದರೂ ತಲುಪಬಹುದು ಎಂದರು.  ಬಿ.ಎಸ್. ಯಡಿಯೂರಪ್ಪ, ಎಚ್.ಡಿ.ದೇವೇಗೌಡ ಅವರಂತೆಯೇ ಸಿದ್ದರಾಮಯ್ಯ ಕೂಡಾ ಜನನಾಯಕ. ಅವರು ಇರಬೇಕಾದ ಪಕ್ಷ ಬಿಜೆಪಿ ಎಂದರು. ಅವರು ಬಿಜೆಪಿ ಹೊಗಳಲು ಸಾಧ್ಯವಿಲ್ಲ. ಬಿಜೆಪಿಗೆ […]

Advertisement

Wordpress Social Share Plugin powered by Ultimatelysocial