ಉದ್ಯೋಗಿಗಳ ಸಂಬಳದಲ್ಲಿ ಹೆಚ್ಚಳ..

ನವದೆಹಲಿ: ಕರೊನಾ ಸಂಕಷ್ಟದಿಂದ ಆದಾಯ, ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಂಪನಿಗಳು ಉದ್ಯೋಗಿಗಳ ವಜಾ, ಸಂಬಳ ಕಡಿತ, ಬಡ್ತಿ ತಡೆ ಮೊದಲಾದ ಕ್ರಮಗಳಿಗೆ ಮುಂದಾಗುತ್ತಿವೆ. ಕೆಲ ಕಂಪನಿಗಳು ಉದ್ಯೋಗಿಗಳನ್ನು ವೇತನರಹಿತ ರಜೆ ಮೇಲೆ ಕಳುಹಿಸುತ್ತಿವೆ. ಆದರೆ, ಕೆಲ ಕಂಪನಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಇವು ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುತ್ತಿವೆ, ಬಡ್ತಿ ನೀಡುತ್ತಿವೆ. ಬೋನಸ್​ ಕೂಡ ಕೊಡುತ್ತಿವೆ. ಎಚ್​ಸಿಎಎಲ್​ ಈಗಾಗಲೇ ಇದನ್ನು ಘೋಷಿಸಿದೆ. ಇದೀಗ ಹಿಂದುಸ್ಥಾನ್​ ಯುನಿಲೀವರ್​ ಲಿಮಿಟೆಡ್​, ಏಷಿಯನ್​ ಪೇಂಟ್ಸ್​, ವಾಲ್​ಮಾರ್ಟ್​ ಒಡೆತನದ ಫ್ಲಿಫ್​ ಕಾರ್ಟ್​, ಮಿಂತ್ರಾ, ಜಾನ್​ಸನ್​ ಆಯಂಡ್​ ಜಾನ್​ಸನ್​, ಸಿಎಸ್​ಎಸ್​ ಕಾರ್ಪ್​, ಕ್ಯಾಪ್​ ಜೆಮಿನಿ ಇಂಡಿಯಾ, ಬಿಎಸ್​ಎಚ್​ ಹೋಮ್​ ಅಪ್ಲೈಯನ್ಸ್​, ಎಚ್​ಸಿಸಿಬಿ ಹಾಗೂ ಭಾರತ್​ ಪೇ ಮೊದಲಾದ ಕಂಪನಿಗಳು ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿವೆ. ಸಂಕಷ್ಟದ ಸಮಯದಲ್ಲಿ ಸಂಸ್ಥೆಯ ವಾಸ್ತವ ವಹಿವಾಟು, ಆದಾಯ ಹಾಗೂ ಉದ್ಯೋಗಿಗಳ ಹಿತ ಕಾಪಾಡಲು ಕಂಪನಿಗಳು ಇಂಥ ನಿರ್ಧಾರ ಕೈಗೊಳ್ಳುತ್ತಿವೆ. ಸಿಬ್ಬಂದಿ ಮೇಲೆ ಗುಣಾತ್ಮಕ ಪರಿಣಾಮವನ್ನು ಇದು ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ. ಸಿಎಸ್​ಎಸ್​ ಕಾರ್ಪ್​ ಸಂಸ್ಥೆ ಸಿಇಒ ಮನೀಷ್​ ಟಂಡನ್​ ಹೇಳುವ ಪ್ರಕಾರ, ಈ ಸಮಯದಲ್ಲಿ ವೇತನ ಹೆಚ್ಚಳ ಸಂಸ್ಥೆಯ ಉದ್ಯೋಗಿಗಳ ಮನೋಸ್ಥೈರ್ಯ ಹೆಚ್ಚಿಸಲಿದೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

ಉದ್ಯಾನವನದಲ್ಲಿದೆ ರೊಬೊಟ್ ನಾಯಿ

Thu May 28 , 2020
ಸಿಂಗಾಪುರ ಉದ್ಯಾನವನದಲ್ಲಿ ಗಸ್ತು ತಿರುಗಲು ಮತ್ತು ಜನರು ಸಾಮಾಜಿಕ ಅಂತರವನ್ನು ಕಾಪಾಡುತ್ತಿದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅಪ್‌ಟೌನ್‌  ಫಂಕ್ ಹಾಡನ್ನು ಹಾಡಲು ಆನ್‌ಲೈನ್‌ನಲ್ಲಿ ಸ್ಪಾಟ್‌ ಎಂಬ ಹಳದಿ ಬಣ್ಣದ ರೊಬೊಟ್‌ ನಾಯಿಯನ್ನು ನಿಯೋಜಿಸಲಾಗಿದೆ. ಇದು ಉದ್ಯಾನವನದ ಮೂಲಕ ಸಾಗುತ್ತಿರುವ ಕಾಲ್ಪಾನಿಕ ನಾಯಿಮರಿಯಂತೆ ಕಾಣುತ್ತದೆ ಮತ್ತು ಆ ಪ್ರದೇಶಕ್ಕೆ ಭೇಟಿ ನೀಡಿವ ಜನರ ಮೇಲೆ ನಿಗಾ ಇಡಲು ಜೊತೆಗೆ ಜನರ ಸಂಖ್ಯೆಯನ್ನು ಅಂದಾಜು ಮಾಡಲು ಕೆಮರಾವನ್ನು ಅಳವಡಿಸಲಾಗಿದೆ. ನಿಮ್ಮ ಸ್ವಂತ ಸುರಕ್ಷತೆ […]

Advertisement

Wordpress Social Share Plugin powered by Ultimatelysocial