ಎಮರ್ಜೆನ್ಸಿ ಆಗಿ ಸಾವಾದ್ರೆ ಏನು ಮಾಡೋದು

ಹೊರ ರಾಜ್ಯದಿಂದ ಬಂದವರಿಗೆ ಸರ್ಕಾರಿ ಕ್ವಾರೆಂಟೈನ್ ಬದಲು ಹೋಂ ಕ್ವಾರೆಂಟೈನ್ ವ್ಯವಸ್ಥೆಯನ್ನು ರಾಜ್ಯ ಸರಕಾರ ಮಾಡುತ್ತಿದೆ. ಇದರಿಂದ ಗ್ರಾಮಗ್ರಾಮಗಳ ನಡುವೆ ವೈಮನಸ್ಸು ಉಂಟಾಗಲಿದೆ‌. ಪರಸ್ಪರ ನೆರೆಮನೆಯಲ್ಲಿ ಸಮಸ್ಯೆ ಆಗಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು‌. ಮಂಗಳೂರನಲ್ಲಿ ಮಾತನಾಡಿದ ಅವರು, ಒಬ್ಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ‌ಮಹಾರಾಷ್ಟ್ರದವರು ರಾಜ್ಯಕ್ಕೆ ಬರೋದು ಬೇಡ ಎಂದು ಹೇಳುತ್ತಾರೆ. ಆದರೆ ರಾಜ್ಯ ಸರಕಾರ ಕ್ವಾರೆಂಟೈನ್ ಇಲ್ಲದೆ, ತಪಾಸಣೆ ಇಲ್ಲದೆ ಮನೆಗೆ ಕಳುಹಿಸುತ್ತಿದೆ‌. ಜಿಲ್ಲಾಡಳಿತ ಟೆಸ್ಟ್ ಮಾಡಿಸದೆ ಮನೆಗೆ ಕಳಿಸೋದು ತಪ್ಪು. ಬಳಿಕ ಎಮರ್ಜೆನ್ಸಿ ಆಗಿ ಸಾವಾದ್ರೆ ಏನು ಮಾಡೋದು. ಪಾಸಿಟಿವ್ ಬಂದ್ರೆ ಸಮಸ್ಯೆ ಇಲ್ಲ. ಕ್ವಾರೆಂಟೈನ್ ನಲ್ಲಿ ಇರಿಸಿ ಗುಣಮುಖ ಮಾಡಬಹುದು. ಆದರೆ ಟೆಸ್ಟ್ ಮಾಡ್ಲಿಕ್ಕೆ ಏನು ಸಮಸ್ಯೆ. ಆದ್ದರಿಂದ ಮಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಸರ್ಕಾರ ಕ್ವಾರೆಂಟೈನ್ ಮಾಡಲಿ, ತಪಾಸಣೆ ಕಡ್ಡಾಯಗೊಳಿಸಲಿ. ಇದು ಮನೆಯವರಿಗೂ ಒಳ್ಳೆಯದು, ಊರಿನವರಿಗೂ ಒಳ್ಳೆಯದು ಎಂದು  ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಸೆಂಟ್ರಲ್ ಮಾರುಕಟ್ಟೆ ಗೊಂದಲವನ್ನು ಬಗೆಹರಿಸಲಿ

Wed Jun 10 , 2020
ಸೆಂಟ್ರಲ್ ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರ ಮಾಡುವುದಾದಲ್ಲಿ ಮೊದಲಿಗೆ ಅಲ್ಲಿ ಸರಿಯಾದ ಮೂಲಭೂತ ಸೌಕರ್ಯ ಗಳ ವ್ಯವಸ್ಥೆ ಮಾಡಲಿ ಎಂದು ಮಾಜಿ ಸಚಿವ‌ ಯು.ಟಿ.ಖಾದರ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಮಾರುಕಟ್ಟೆ ಸ್ಥಳಾಂತರ ಮಾಡುವ ಸಂದರ್ಭ ನಮ್ಮನ್ನು ಕರೆಯದೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಸಭೆ ಮಾಡಿದ್ದರು. ಆದರೆ ಇದೀಗ ವ್ಯಾಪಾರಿಗಳಿಗೆ ಸಮಸ್ಯೆಗಳು ತಲೆದೋರಿರುವ ಸಂದರ್ಭದಲ್ಲಿ ಯಾರೂ ಇತ್ತ ತಲೆಹಾಕುತ್ತಿಲ್ಲ. ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರ ದಿಂದ ವ್ಯಾಪಾರಿಗಳು ಮಾತ್ರವಲ್ಲ ಜನಸಾಮಾನ್ಯರಿಗೂ ಸಮಸ್ಯೆಯಾಗಿದೆ. ಆದ್ದರಿಂದ […]

Advertisement

Wordpress Social Share Plugin powered by Ultimatelysocial