ಕಳಪೆ ಬೀಜ ಖರೀದಿಸಬಾರದು, ಇದು ಆತ್ಮಹತ್ಯೆಗೆ ಸಮಾನ:ಬಿ.ಸಿ.ಪಾಟೀಲ್

ಕಡಿಮೆ ಬೆಲೆಗೆ ಬಿತ್ತನೆ ಬೀಜ ಸಿಗುತ್ತದೆ ಎಂಬ ಆಸೆಗೆ ಬಿದ್ದು ರೈತರು ಕಳಪೆ ಬೀಜಗಳನ್ನು ಖರೀದಿಸಬಾರದು. ಇದು ಆತ್ಮಹತ್ಯೆಗೆ ಸಮಾನ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ  ಮಾತನಾಡಿದ ಅವರು,’ಇನ್ನೇನು ಮುಂಗಾರು ಪ್ರಾರಂಭವಾಗುತ್ತಿದೆ. ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಎಲ್ಲವೂ ಸಿಗಲಿವೆ’. ‘ಸರ್ಕಾರ ನಿಗದಿಮಾಡಿರುವ ದರದಲ್ಲೇ ಕೃಷಿ ಉತ್ಪನ್ನಗಳ ಮಾರಾಟ ನಡೆಯಬೇಕು. ಪ್ರತಿ ಉತ್ಪನ್ನಗಳ ದರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರದಲ್ಲಿ ಹಾಕಬೇಕು. ಇದನ್ನು ಮೀರಿದರೆ ದೂರು ನೀಡಿ. ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

 

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆ

Wed Apr 29 , 2020
ಕೊರೊನಾ ವೈರಸ್ ಮಹಾಮಾರಿಗೆ ಕಲಬುರಗಿ ಮಂದಿ ಬೆಚ್ಚಿ ಬೀಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೇ ದಿನ ರಾಜ್ಯದಲ್ಲಿ 9 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ . ಈ ಕುರಿತು  ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲಿಟಿನ್  ನಿಂದ ತಿಳಿದು ಬಂದಿದೆ. ಹೊಸದಾಗಿ  ಸೋಂಕಿತರ ಪೈಕಿ ಕಲಬುರಗಿಯಲ್ಲಿ 8, ಮತ್ತು ಬೆಳಗಾವಿಯಲ್ಲಿ 1 ದೃಢವಾಗಿದೆ.  ಇಂದಿನ ಸೋಂಕಿತರಲ್ಲಿ ಹೆಚ್ಚಿನವರು ಮಕ್ಕಳೇ […]

Advertisement

Wordpress Social Share Plugin powered by Ultimatelysocial