ತೀವ್ರ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಕೋವಿಡ್-೧೯ರ ಅಟ್ಟಹಾಸದ ನಡುವೆ ಧಾರಾಕಾರ ಮಳೆಗೆ ಅಸ್ಸಾಂ ನ ಧೇಮಾಜಿ, ಲಾಖಿಂಪುರ್, ರ‍್ಯಾಂಗ್, ನಾಲ್ಬಾರಿ, ಗೋಲಾಪಾರಾ, ದಿಬ್ರುಗಢ್ ಮತ್ತು ಟಿನ್ ಸುಕಿಯಾ ಜಿಲ್ಲೆಗಳ ಜನರು ಮಳೆಯಿಂದಾಗಿ ಸಂಕಷ್ಟಗೊಳಗಾಗಿದ್ದಾರೆ. ಹಾಗೂ ಸುಮಾರು ಎರಡು ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ, ೯ಸಾವಿರ ಗ್ರಾಮಸ್ಥರನ್ನು ೩೫ ನಿರಾಶ್ರಿತ ಶಿಬಿರಗಳಿಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ. ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ೧೦೦೭ ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಅಷ್ಟೇ ಅಲ್ಲದೇ ೧೬,೫೦೦ ದೇಶೀಯ ಪ್ರಾಣಿ, ಪಕ್ಷಿಗಳು ಸಮಸ್ಯೆ ಅನುಭವಿಸುವಂತಾಗಿದೆ. ಮುಂದಿನ ೨-೩ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಎರಡು ಗುಂಪುಗಳ ನಡುವೆ ಮಾರಾಮಾರಿ

Wed May 27 , 2020
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಜಾಕಿರ್ ಹುಸೇನ್ ನಗರದಲ್ಲಿ ಎರಡು ಗುಂಪುಗಳ ನಡುವೆ  ಮಾರಾಮಾರಿ ನಡೆದಿದೆ. ಹಳೆ ದ್ವೇಷ ಹಾಗೂ ರಾಜಕೀಯ ವೈಸಮ್ಯ ಕಾರಣದಿಂದ ಎರಡು ಗುಂಪುಗಳ ನಡುವೆ ಒಡೆದಾಟ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲೇ  ಮೂರು ಹೆಣಗಳು ಹಾಗೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಕವುಲ್ಲ ಖಾನ್(35), ಇದ್ರಿಷ್(30), ಹಾಗೂ ಕೈಸರ್(35) ಸ್ಥಳದಲ್ಲೇ ಸತ್ತ ರ್ದುದೈವಿಗಳು . ಪಟ್ಟಣದ ಪೋಲಿಸರು ಸ್ಥಳಕ್ಕೆ ಅಗಮಿಸಿದ್ದಾರೆ. ಇಡೀ […]

Advertisement

Wordpress Social Share Plugin powered by Ultimatelysocial