ದೇಶದ ಹಲವೆಡೆ ಮಂದಿರಗಳು, ಹೋಟೆಲ್ ಗಳು ಆರಂಭ

ನವದೆಹಲಿ:  ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ದೇಶದ ಹಲವೆಡೆ ಇಂದು ಕೆಲವು ಕಠಿಣ ನಿರ್ಬಂಧಗಳೊಂದಿಗೆ ದೇವಾಲಯಗಳು, ಹೋಟೆಲ್, ರೆಸ್ಟೋರೆಂಟ್‍ಗಳು ತೆರೆದಿವೆ.  ಆದರೆ, ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಭೀತಿಯಿಂದಾಗಿ ದೇವಸ್ಥಾಗಳು ಮತ್ತು ಹೋಟೆಲ್-ರೆಸ್ಟೋರೆಂಟ್‍ಗಳಿಗೆ ಬೀಗ ಮುದ್ರೆಗಳನ್ನು ಮುಂದುವರೆಸಲಾಗಿದೆ. ಇಂದಿನಿಂದ ದೇಶದ ಬಹುತೇಕ ನಗರಗಳ ಪ್ರಸಿದ್ಧ ದೇವಾಲಯಗಳಿಗೆ ಜನರು ತೆರಳಿ ಶ್ರದ್ಧಾಭಕ್ತಿಯಿಂದ ನಮನ ಸಲ್ಲಿಸಿದರು. ತೀರ್ಥ, ಪ್ರಸಾದದ ವಿನಿಯೋಗ ಮತ್ತು ಪವಿತ್ರಜಲ ಪ್ರೋಕ್ಷಣೆ ನಿರ್ಬಂಧಿಸಿದ ಕಾರಣ ಜನರು ದೇವರ ದರ್ಶನ ಮಾತ್ರ ಮಾಡಿ ನಮಸ್ಕರಿಸಿದರು. ಅನಾರೋಗ್ಯ ಪೀಡಿತರು, ವೃದ್ಧರು, 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ದೇಗುಲ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಕೊರೊನಾ ಸಂಕಷ್ಟದಿಂದ ನಮ್ಮನ್ನು ಪಾರು ಮಾಡುವಂತೆ ಭಗವಂತನಿಗೆ ಹರಕೆ ತೀರಿಸುತ್ತಿದ್ದುದು ಎಲ್ಲೆಡೆ ಕಂಡು ಬಂತು. ಆದರೆ ಕೆಲವು ರಾಜ್ಯಗಳು ಮತ್ತು ಕೊರೊನಾ ಹೆಚ್ಚಾಗಿರುವ ನಗರಗಳಲ್ಲಿ ದೇವಸ್ಥಾನಗಳು, ಮಠಮಂದಿರಗಳು, ಹೋಟೆಲ್-ರೆಸ್ಟೋರೆಂಟ್‍ಗಳ ಸ್ತಗಿತವನ್ನು ಮುಂದುವರೆಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ನಾಯಕರ ಸಂದೇಶ

Mon Jun 8 , 2020
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕರು ಒಂದು ಸಂದೇಶ ಕಳಿಸಿದ್ದಾರೆ ಎಂದು ರಾಜ್ಯಸಭಾ ಟಿಕೆಟ್​ ವಂಚಿತ ರಮೇಶ್ ಕತ್ತಿ ಇಂದು ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಎರಡು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಸಂತೋಷವಾಗಿದ್ದು, ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿದ್ದೇವೆ ಎಂಬ ಸ್ಪಷ್ಟ ಸಂದೇಶ ಹೈಕಮಾಂಡ್ ಕಳಿಸಿದೆ ಎಂದು ತಿಳಿಸಿದರು. ನಾನೂ ಕೂಡ ರಾಜ್ಯಸಭಾ ಟಿಕೆಟ್​ ಅಪೇಕ್ಷಿತನಾಗಿದ್ದೆ. ಪಕ್ಷಕ್ಕೆ ದುಡಿದ ನಮ್ಮ ಜಿಲ್ಲೆಯಯವರನ್ನೇ ಗುರುತಿಸಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial