ಧರ್ಮ ಪ್ರಚಾರ ಮಾಡುತ್ತಿದ್ದ 10 ಜನರ ಬಂಧನ

ಬೀದರ್: ಪ್ರವಾಸಿ ವೀಸಾ ಮುಗಿದರೂ ಧರ್ಮ ಪ್ರಚಾರದಲ್ಲಿ ತೊಡಗಿದ್ದ 10 ಕಿರ್ಗಿಸ್ತಾನ ಪ್ರಜೆಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಜೂನ್ 16 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೀದರ್ ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇವರೆಲ್ಲ ವೀಸಾ ಅವಧಿ ಮುಗಿದರೂ ಬೀದರ್ ನಲ್ಲಿ ಉಳಿದುಕೊಂಡು ಧರ್ಮ ಪ್ರಚಾರ ನಡೆಸಿದ್ದರು. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ತಿಂಗಳ ಕ್ವಾರಂಟೈನ್ ಬಳಿಕ ಕೋರ್ಟಿಗೆ ಹಾಜರುಪಡಿಸಲಾಗಿದೆ ಎನ್ನಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ಜಿಲ್ಲಾಧಿಕಾರಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾವಣೆ

Thu Jun 4 , 2020
ಬೀದರ್:  ಬೀದರ್​​​ ಜಿಲ್ಲಾಧಿಕಾರಿ ಡಾ‌. ಹೆಚ್.ಆರ್.ಮಹಾದೇವ್ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಹೊರಡಿಸಿದ ಆದೇಶದಲ್ಲಿ ಜಿಲ್ಲಾಧಿಕಾರಿ ಡಾ‌. ಹೆಚ್.ಆರ್.ಮಹದೇವ್ ಅವರನ್ನು ವರ್ಗಾವಣೆಗೊಳಿಸಲಾಗಿದೆ. ​​​​ಬೀದರ್​​ಗೆ ರಾಮಚಂದ್ರನ್ ಆರ್. ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇವರು ಈ ಹಿಂದೆ ರಾಷ್ಟ್ರೀಯ ಆರೋಗ್ಯ ನಿರ್ದೇಶನಾಲಯ ಬೆಂಗಳೂರಿನ ಯೋಜನಾ ನಿರ್ದೇಶಕರಾಗಿದ್ದರು.   Please follow and […]

Advertisement

Wordpress Social Share Plugin powered by Ultimatelysocial