ಬೆಂಗಳೂರು : ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ 5 ಮಂದಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ನೂರಾರು ಪೊಲೀಸರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ..ಪೊಲೀಸ್ ಕಮೀಷನರ್ ಆದೇಶದಂತೆ ಕ್ವಾರಂಟೈನ್ ಮಾಡಲಾಗುತ್ತಿದೆ.ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ನಂತರ ಆರೋಪಿಗಳನ್ನು ಪಶ್ಚಿಮ ವಿಭಾಗ ಪೊಲೀಸರು ಹಾಗೂ ಸಿಸಿಬಿ ಪೊಲೀಸರ ನೂರಾರು ತಂಡ ಬಂಧಿಸಿದ್ರು.ಈಗ ಆರೋಪಿಗಳಲ್ಲಿ ಸೋಂಕು ಧೃಡಪಟ್ಟಿದ್ದು,ಆರೋಪಿಗಳ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ್ದ 23 ಪೊಲೀಸ್ ಅಧಿಕಾರಿಗಳು,ನೂರಾರು ಪೊಲೀಸರನ್ನು ಖಾಸಗಿ ಹೊಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ..ಸದ್ಯ ಪಾದರಾಯನಪುರಕ್ಕೆ ಬಂದೋಬಸ್ತ್ ಗೆ ಹೋಗಿದ್ದ ಎಲ್ಲಾ ಪೊಲೀಸರಿಗೂ ಭಯ ಶುರುವಾಗಿದೆ.ಎಲ್ಲಿ ನಮಗೆ ಕೊರೊನಾ ಸೋಂಕು ಹರಡಿದೆ ಅಂತ..ಈಗ ಎಲ್ಲಾ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂಧಿಯನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ..
ಪಾದಾರಯನಪುರದಲ್ಲಿ ಡ್ಯೂಟಿ ಮಾಡಿದ ಪೊಲೀಸರು ಕ್ವಾರಂಟೈನ್
Please follow and like us: