ಪ್ರವಾಸಿಗರನ್ನೇ ಕಾಯುತ್ತಿದೆ ಕೊರೊನಾ ಮುಕ್ತ ರಾಜ್ಯ

ಪಣಜಿ: ದೇಶದಲ್ಲಿಯೇ ಕರೊನಾ ಮುಕ್ತ ಮೊದಲ ರಾಜ್ಯವೆನಿಸಿದೆ ಗೋವಾ. ಇಲ್ಲಿದ್ದ ಏಳು ಸೋಂಕಿತರ ಪೈಕಿ ಎಲ್ಲರೂ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದರೆ, ಎಲ್ಲ ರಾಜ್ಯಗಳಂತೆ ಇಲ್ಲಿಯೂ ಲಾಕ್‌ಡೌನ್ ನಿಯಮಗಳು ಅನ್ವಯಿಸುತ್ತವೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಈ ರಾಜ್ಯ ಹೊರಗಿನ ಜನರೇ ಇಲ್ಲದಂತಾಗಿ ಆದಾಯದ ಮೂಲವನ್ನೇ ಕಳೆದುಕೊಂಡಿದೆ. ಇನ್ನೊಂದೆಡೆ ಗೋವಾ ಪ್ರಸಿದ್ಧವಾಗಿರುವುದು ಜೂಜಾಟಕ್ಕೆ. ಕ್ಯಾಸಿನೋಗಳು ಕಾನೂನುಬದ್ಧ ಜೂಜಾಟ ನಡೆಸಿದರೆ, ಅಕ್ರಮವಾಗಿ ನಡೆಯುವ ಮಟ್ಕಾ ಸಾವಿರಾರು ಜನರಿಗೆ ಉದ್ಯೋಗ ಮೂಲ. ಪ್ರತಿದಿನ ೧೦-೧೨ ಕೋಟಿ ವಹಿವಾಟು ನಡೆಸುವ ಮಟ್ಕಾಗೆ ೧೦,೦೦೦ಕ್ಕೂ ಅಧಿಕ ಬುಕ್ಕಿಗಳಿದ್ದಾರೆ. ನಗದು ವಹಿವಾಟು ಇದರ ಜೀವಾಳವಾಗಿರುವುದರಿಂದ ಇದನ್ನು ಆನ್‌ಲೈನ್‌ನಲ್ಲಿ ನಡೆಸಲು ಸಾಧ್ಯವಿಲ್ಲ. ಇನ್ನು ಬುಕ್ಕಿಗಳು ಮನೆಮನೆಗೆ ಹೋಗಿ ನಂಬರ್ ಬರೆದುಕೊಳ್ಳುವುದು ಅಸಾಧ್ಯದ ಮಾತು. ಹೀಗಾಗಿ, ಮಟ್ಕಾ ಬುಕ್ಕಿಗಳು ಈಗ ಪರ್ಯಾಯ ಉದ್ಯೋಗ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವರು ತರಕಾರಿ, ಹಣ್ಣು-ಹಂಪಲು ಮಾರಾಟದಲ್ಲಿ ತೊಡಗಿದ್ದರೆ, ಇನ್ನು ಕೆಲವರು, ಮೊಟ್ಟೆ ಹಾಗೂ ಇನ್ನಿತರ ದಿನಸಿ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾರೆ. ಕೆಲ ದಿನಗಳಲ್ಲಿ ಲಾಕ್‌ಡೌನ್ ತೆರವಾಗಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬರಲಿದೆ. ಮಟ್ಕಾ ಎಂದಿನಂತೆ ನಡೆಯಲಿದೆ ಎಂಬ ವಿಶ್ವಾಸ ಇವರದ್ದಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಹಣ್ಣುಗಳ ಸಾಗಾಣಿಕೆಗೆ ವಿಶೇಷ ರೈಲು

Sun Apr 26 , 2020
ದೆಹಲಿ: ಲಾಕ್‌ಡೌನ್ ಕಾರಣಕ್ಕಾಗಿ ಮಾವಿನ ಹಣ್ಣುಗಳನ್ನು ಸವಿಯುವ ಅವಕಾಶ ಕಳೆದುಕೊಳ್ಳಲಿದ್ದ ಉತ್ತರ ಭಾರತದ ಜನರಿಗೆ ರೈಲ್ವೆ ಸಚಿವಾಲಯ ಮಾವಿನ ಹಣ್ಣುಗಳನ್ನು ತಲುಪಿಸಲು ವಿಶೇಷ ಸರಕು ಸಾಗಾಣಿಕೆ ರೈಲುಗಳ ವ್ಯವಸ್ಥೆ ಮಾಡಿದೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮಹಾರಾಷ್ಟçದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳನ್ನು ಈ ರೈಲುಗಳ ಮೂಲಕ ತಲುಪಿಸಲಿದೆ.ಮಾವಿನ ಹಣ್ಣಿನ ಜೊತೆಗೆ ಕಿತ್ತಳೆ, ದ್ರಾಕ್ಷಿ, ಬಾಳೆಹಣ್ಣು ಹಾಗೂ ದಾಳಿಂಬೆ ಹಣ್ಣುಗಳನ್ನು ವಿಶೇಷ ರೈಲುಗಳ ಮೂಲಕ ದೆಹಲಿ ಹಾಗೂ […]

Advertisement

Wordpress Social Share Plugin powered by Ultimatelysocial