ಕೋಲಾರ ಜಿಲ್ಲೆಯಲ್ಲಿ ಹಣದ ರಾಜಕಾರಣ ಮಾಡುವ ಮೂಲಕ ರಾಜಕೀಯ ಪಾವಿತ್ರ್ಯತೆಯನನು ಹಾಳು ಮಾಡಿದ್ದೇ ಕೊತ್ತೂರು ಮಂಜುನಾಥ್ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಕಿಡಿಕಾರಿದ್ದಾರೆ.ಅವರು ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಷ್ಟು ದಿನ ಕೊತ್ತೂರು ಮಂಜುನಾಥ್ ಎಲ್ಲಿದ್ರು..? ಈಗ ದಿಢೀರ್ ಅಂತ ಬಂದು ಕೋಲಾರ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಾನೇ ಅಂತ ಹೇಳಿಕೆ ನೀಡಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಕೋಲಾರ ಕ್ಷೇತ್ರದ ಭವಿಷ್ಯ ನೆನೆದು ಆತಂಕ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಹಣ ಹಂಚದೇ ರಾಜಕಾರಣ ಮಾಡಿದ್ದೇನೆ ಎಂದು ದೇವಾಲಯದಲ್ಲಿ ಪ್ರಮಾಣ ಮಾಡಲು ಹೇಳಿ.. ಮುಂದಿನ 2023 ರ ಚುನಾವಣೆಯಲ್ಲಿ ಅವರ ವಿರುದ್ಧ ನಾನೇ ಸ್ಪರ್ಧಿಸಲು ಸಿದ್ಧ. ಗೆಲ್ಲಲಿ ನೋಡೋಣ ಎಂದು ಬಹಿರಂಗವಾಗಿ ಸವಾಲೆಸೆದ ಅವರು ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಯಾರ ಕೈಗೂ ಸಿಗದ ವ್ಯಕ್ತಿ. ಈ ಹಿಂದೆ ಇಲ್ಲಿ ಗೆದ್ದಿದ್ದ ಮನೋಹರ್ ರೀತಿ ಅವರೂ ಸಹ ಕೈಗೆ ಸಿಗುವುದಿಲ್ಲ. ಅನಿಲ್ ಎರಡನೇ ಮನೋಹರ್ ಎಂದು ಮೂದಲಿಸಿದ ವರು ಮುಂದಿನ ಐದು ವರ್ಷ ಚಿಂತಕರ ಛಾವಡಿಗೆ ಹೋದ ಅನಿಲ್ ಕುಮಾರ್ ಏನು ಕೆಲಸ ಮಾಡುತ್ತಾರೋ ನೋಡಬೇಕು ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada