ರಾಜಕೀಯ ಪಾವಿತ್ರ್ಯತೆಯನನು ಹಾಳು ಮಾಡಿದ್ದೇ ಕೊತ್ತೂರು ಮಂಜುನಾಥ್:ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಕಿಡಿ

ಕೋಲಾರ ಜಿಲ್ಲೆಯಲ್ಲಿ ಹಣದ ರಾಜಕಾರಣ ಮಾಡುವ ಮೂಲಕ ರಾಜಕೀಯ ಪಾವಿತ್ರ್ಯತೆಯನನು ಹಾಳು ಮಾಡಿದ್ದೇ ಕೊತ್ತೂರು ಮಂಜುನಾಥ್ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಕಿಡಿಕಾರಿದ್ದಾರೆ.ಅವರು ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಷ್ಟು ದಿನ ಕೊತ್ತೂರು ಮಂಜುನಾಥ್ ಎಲ್ಲಿದ್ರು..? ಈಗ ದಿಢೀರ್ ಅಂತ ಬಂದು ಕೋಲಾರ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಾನೇ ಅಂತ ಹೇಳಿಕೆ ನೀಡಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಕೋಲಾರ ಕ್ಷೇತ್ರದ ಭವಿಷ್ಯ ನೆನೆದು ಆತಂಕ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಹಣ ಹಂಚದೇ ರಾಜಕಾರಣ ಮಾಡಿದ್ದೇನೆ ಎಂದು ದೇವಾಲಯದಲ್ಲಿ ಪ್ರಮಾಣ ಮಾಡಲು ಹೇಳಿ.. ಮುಂದಿನ 2023 ರ ಚುನಾವಣೆಯಲ್ಲಿ ಅವರ ವಿರುದ್ಧ ನಾನೇ ಸ್ಪರ್ಧಿಸಲು ಸಿದ್ಧ. ಗೆಲ್ಲಲಿ ನೋಡೋಣ ಎಂದು ಬಹಿರಂಗವಾಗಿ ಸವಾಲೆಸೆದ ಅವರು ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಯಾರ ಕೈಗೂ ಸಿಗದ ವ್ಯಕ್ತಿ. ಈ ಹಿಂದೆ ಇಲ್ಲಿ ಗೆದ್ದಿದ್ದ ಮನೋಹರ್ ರೀತಿ ಅವರೂ ಸಹ ಕೈಗೆ ಸಿಗುವುದಿಲ್ಲ. ಅನಿಲ್ ಎರಡನೇ ಮನೋಹರ್ ಎಂದು ಮೂದಲಿಸಿದ ವರು ಮುಂದಿನ ಐದು ವರ್ಷ ಚಿಂತಕರ ಛಾವಡಿಗೆ ಹೋದ ಅನಿಲ್ ಕುಮಾರ್ ಏನು ಕೆಲಸ ಮಾಡುತ್ತಾರೋ ನೋಡಬೇಕು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರ ವರ್ತನೆ ಖಂಡಿಸಿ ಹಲವೆಡೆ ಪ್ರತಿಭಟನೆ 

Sat Dec 18 , 2021
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್ ಪುಂಡರು ಕರ್ನಾಟಕ ನಾಡ ಧ್ವಜವನ್ನು ಸುಟ್ಟು ಹಾಕಿದ್ದು ವಿರೋಧಿಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಸೇನೆ ಕಾರ್ಯಕರ್ತರು ಚಿಂಚೋಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು .ತಾಲ್ಲೂಕು ಅಧ್ಯಕ್ಷ ಮಜರ್ ಸೌದಾಗರ ಮಾತನಾಡಿ ಯಾವುದೇ ನಾಡಿನ ಧ್ವಜ ಸುಡುವುದು ಕಾನೂನು ಬಾಹಿರವಾಗಿದೆ ಅಲ್ಲದೆ ಬೆಳಗಾವಿ ಜಿಲ್ಲೆಯು ಕರ್ನಾಟಕ ಕರ್ನಾಟಕದ್ದು ನಾಡ ಧ್ವಜ ಸುಟ್ಟುಹಾಕಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ […]

Advertisement

Wordpress Social Share Plugin powered by Ultimatelysocial