ಲಾಕಡೌನ ಮಧ್ಯ ರೈತರು ಮುಂಗಾರು ಬಿತ್ತನೆಗಾಗಿ ಭೂಮಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಿರಂತರವಾಗಿ ಮೂರು ದಿವಸ ಸುರಿದ ಮಳೆ ಶುರುವಾಗಿರುವುದರಿಂದ ರೈತರು ಬಿತ್ತನೆ ಮಾಡಬೇಕೆಂದು ಯೋಚಿಸುತ್ತಲೆ ಆದರೆ ಬೀದರ ನಗರ ಸೇರಿದಂತೆ ತಾಲೂಕ ಮಟ್ಟದಲ್ಲಿ ಸೋಯಾ ಬೀನ್ ಬೀಜ ಸಿಗದೆ ರೈತರು, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಕ್ಕಾಗಿ ಪರದಾಡುವಂತಹ ಪರಿಸ್ಥಿತಿ ಎದುರುವಾಗಿದೆ. ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗು ಮುಂಚೆ ಸೋಯಾ ಬೀಜಗಳ ಕೊರತೆ ಆಗಿದೆ.ನಿತ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ ತೆರಳಿದರೆ ರೈತ ಸಂಪರ್ಕ ಕೇಂದ್ರದ ಅಧಕಾರಿಗಳು ಸಿಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬಿತ್ತನೆಗೆ ಸೋಯಾ ಬೀಜದ ಕೊರತೆ
Please follow and like us: