ಪತ್ರಕರ್ತರ ಭವನದಲ್ಲಿ ಸಾಂಸ್ಕೃತಿಕ ಕಲಾವಿದರಿಗೆ ದಿನಸಿಕಿಟ್ ವಿತರಣೆ

ಕೋಲಾರದಲ್ಲಿ ಕಲಾವಿದರಿಗೆ ತಮ್ಮ ಕೈಲಾದ ಸಹಾಯ ಹಸ್ತ ಜೊತೆಗೆ ನಗರದಲ್ಲಿ ಕಲಾವಿದ ಸಂಘಕ್ಕೆ ಒಂದು ಕಲಾಭವವನ್ನು ನಿರ್ಮಿಸಿ ಕೊಡಲಾಗುವುದು ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಓಂ ಶಕ್ತಿ ಚಲಪತಿ ಹೇಳಿದರು.  ನಗರದ ಪತ್ರಕರ್ತರ ಭವನದಲ್ಲಿ ಶ್ರೀ ಸಾಯಿ ನಂದಾ ದೀಪ ಚಾರಿಟಬಲ್ ಟ್ರಸ್ಟ್, ಅವಿನಾಶ್ ಇವೆಂಟ್ಸ್ ಸಹಯೋಗದಲ್ಲಿ ಲಘು ಸಂಗೀತ ಹಾಗೂ ಸಾಂಸ್ಕೃತಿಕ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಕೊರೊನಾ ಕಾಲಿಟ್ಟಾಗಿನಿಂದ ಕಲಾವಿದರು  ತೀವ್ರ ಸಂಕಷ್ಟ ಎದುರಿಸುವಂತ ಪರಿಸ್ಥಿತಿ ಎದುರಾಗಿದೆ ಕೆಲವು ಕಲಾವಿದರಿಗೆ ಸ್ವಂತ ಮನೆಯಿಲ್ಲ ಬಾಡಿಗೆ ಕಟ್ಟಲು ಕಾರ್ಯಕ್ರಮಗಳಿಗೆ ಅನುಮತಿ ಇಲ್ಲದೆ ಪರಿತಪಿಸುತ್ತಿದ್ದಾರೆ ಕಲಾವಿದರ ನೆರವಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಹಾಗೂ ಮುಂದಿನ ತಿಂಗಳು ನಮ್ಮ ಮಿಡಿಯುವ ತಂಡದಿಂದ ಕಲಾವಿದರಿಗೆ ದಿನಸಿ ಕಿಟ್ ಗಳನ್ನು ನೀಡಲಾಗುತ್ತದೆ ಯಾರು ಸಹ ಎದೆಗುಂದದೇ ಇರಬೇಕು ಕೊರೊನಾ ಬಗ್ಗೆ ಭಯಬೇಡ ಜಾಗೃತಿ ಇರಲಿ ಆರೋಗ್ಯ ಇಲಾಖೆ ನೀಡಿರುವ ಸಲಹೆ ಸೂಚನೆಗಳನ್ನು ತಪ್ಪದೇ ಪಾಲಿಸಿ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಕೊಚ್ಚಿ ಹೋಗುತ್ತಿದ್ದ ವಾಹನದಿಂದ ಐವರ ರಕ್ಷಣೆ

Sat Jul 25 , 2020
ಕಲಬುರಗಿ ಜೆಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ ವಾಹನವನ್ನ ಜೀವದ ಹಂಗು ತೊರೆದು ಗ್ರಾಮಸ್ಥರು ರಕ್ಷಿಸಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗುತ್ತಿದ ಮಾರುತಿ ಸುಜಕಿ ವಾಹನದಲ್ಲಿ ಐದು ಜನರನ್ನು ರಕ್ಷಿಸಲಾಗಿದೆ. ಸ್ಥಳೀಯರು ವಾಹನಕ್ಕೆ ಹಗ್ಗ ಕಟ್ಟಿ, ಹಗ್ಗವನ್ನು ಮರವೊಂದಕ್ಕೆ ಕಟ್ಟಿ ಕೊಚ್ಚಿ ಹೋಗದಂತೆ ತಡೆದಿದ್ದಾರೆ. ನಂತರ ವಾಹನದಲ್ಲಿ ಐವರನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಹೊರತಂದು ಸಾಹಸ ಮೆರೆದಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial