ಸತ್ಯವನ್ನರಿಯದ ಪಠ್ಯ ಪುಸ್ತಕ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಚಾರ ಎಸಗಿದ್ದಾರೆ ಎಂದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾಸಭಾ ತಾಲೂಕಾ ಘಟಕ ಹಾಗೂ ತಾಲೂಕಿನ ಲಿಂಗಾಯತ ಸಂಘಟನೆಗಳಿಂದ ಪ್ರತಿ ಭಟನೆ ನಡೆಸುತ್ತಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ 2022-23ನೇ ಸಾಲಿನ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಅಳವಡಿಸಿದ ಬಸವಣ್ಣನವರ ಕುರಿತು ಒಂದು ಪುಟದ ಕಿರು ಬರಹದಲ್ಲಿ ಅವರ ಚರಿತ್ರೆ ಮತ್ತು ಚಾರಿತ್ರೆಗಳಿಗೆ ದಕ್ಕೆತರುತ್ತಿದ್ದಾರೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ವೀರಶೈವ ಎನ್ನುವದು 14 ನೇ ಶತಮಾನದಿಂದ ಇಚೆಗೆ ಬಳಕೆಗೆ ಬಂದ ಪದ ಈ ಸತ್ಯವನ್ನರಿಯದ ಪಠ್ಯ ಪುಸ್ತಕ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಚಾರ ಎಸಗಿದ್ದಾರೆ .ಇದರಿಂದ ವಿದ್ಯಾರ್ಥಿಗಳ ಮನದಲ್ಲಿ ತಪ್ಪು ಅಭಿಪ್ರಾಯಗಳ ಬೀಜ ಬಿತ್ತಿದಂತಾಗುತ್ತದೆ . ಕಾರಣ ಈ ದೋಷಪೂರಿತ ಪಠ್ಯಮಸ್ತಕವನ್ನು ತಕ್ಷಣ ಸ್ಥಗಿತಗೊಳಿಸಿ ತಜ್ಞರಿಂದ ಸೂಕ್ತ ತಿದ್ದುಪಡಿ ಮಾಡಿಸಿ ದೋಷಮುಕ್ತ ಮಾಡಿಸಿ ವಿದ್ಯಾರ್ಥಿಗಳಿಗೆ ಕೊಡಬೇಕೆಂದು ಆಗ್ರಹಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada