ಕೋಲಾರ ಜಿಲ್ಲೆಯ ಬಂಗಾಪೇಟೆ ತಾಲ್ಲೂಕಿನಲ್ಲಿಬೈಕ್ ಮತ್ತು ಸರಕು ಸಾಗಣೆ ವಾಹನದ ಮಧ್ಯೆ ಅಫಘಾತವಾಗಿ ಬೈಕ್ ಸವಾರರುರಿಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ವರವಲಯದ ಕೋಡಿಕಣ್ಣೂರು ಕೆರೆಯ ಬಳಿ ನಡೆದಿದೆ. ಶ್ರೀನಿವಾಸ್ (21) ಮತ್ತು ನಂದೀಶ್ (25) ಮೃತ ದುರ್ದೈವಿಗಳು ಸ್ನೇಹಿತರಾಗಿದ್ದರೂ ಎಂದು ತಿಳಿದು ಬಂದಿದೆ. .ಇವರಿಬ್ಬರು ಕೋಲಾರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸರಕು ಸಾಗಣೆ ವಾಹನದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.