ಲಾಕ್‌ಡೌನ್ ಎಫೆಕ್ಟ್: ಏಷ್ಯಾದ ಅತಿದೊಡ್ಡ ಬಾಳೆಹಣ್ಣು ಮಾರುಕಟ್ಟೆ ತತ್ತರ

ಅಸ್ಸಾಂ: ಕೊರೊನಾ ವೈರಸ್ ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಏಷ್ಯಾದ ಅತಿದೊಡ್ಡ ಬಾಳೆಹಣ್ಣಿನ ಮಾರುಕಟ್ಟೆ ಮುಚ್ಚಿರುವುದರಿಂದ ಬಾಳೆಹಣ್ಣು ಉತ್ಪಾದಕರ ಮೇಲೆ ಪರಿಣಾಮ ಬೀರಿದೆ. ಏಷ್ಯಾದ ಅತಿದೊಡ್ಡ ಬಾಳೆಹಣ್ಣು ಮಾರುಕಟ್ಟೆ ಎಂದು ಕರೆಯಲ್ಪಡುವ ಪಶ್ಚಿಮ ಅಸ್ಸಾಂನ ಗೋಲ್ಪಾರ ಜಿಲ್ಲೆಯಲ್ಲಿರುವ ದಾರಂಗಿರಿ ಬಾಳೆಹಣ್ಣು ಮಾರುಕಟ್ಟೆ ಕಳೆದ ಹಲವು ವಾರಗಳಿಂದ ಮುಚ್ಚಿದ್ದು, ಗೋಲ್ಪಾರ ಜಿಲ್ಲೆ ಮತ್ತು ಮೇಘಾಲಯದ ಗಾರೋ ಹಿಲ್ಸ್ ಪ್ರದೇಶದ ಬಾಳೆಹಣ್ಣು ಉತ್ಪಾದಕರ ಮೇಲೆ ಪರಿಣಾಮ ಬೀರಿದೆ.ಗೋಲ್ಪಾರ ಜಿಲ್ಲೆಯಲ್ಲಿ ಸುಮಾರು ೩,೭೦೦ ಹೆಕ್ಟೇರ್ ಭೂಮಿಯಲ್ಲಿ ಬಾಳೆ ಕೃಷಿ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ೪೦,೦೦೦ ಮೆಗಾ ಟನ್ ಬಾಳೆಹಣ್ಣು ಉತ್ಪಾದನೆಯಲ್ಲಿ ೮೦೦ಕ್ಕೂ ಹೆಚ್ಚು ರೈತರು ತೊಡಗಿಕೊಂಡಿದ್ದಾರೆ.ಇದಲ್ಲದೆ, ಮೇಘಾಲಯದ ಗ್ಯಾರೋ ಬೆಟ್ಟಗಳ ಪ್ರದೇಶದಲ್ಲಿ ಬೆಳೆದ ಸಾವಿರಾರು ಟನ್ ಬಾಳೆಹಣ್ಣುಗಳನ್ನು ಈ ಮಾರುಕಟ್ಟೆಗೆ ತರಲಾಗುತ್ತದೆ. ಆದರೆ ಲಾಕ್‌ಡೌನ್‌ನಿಂದಾಗಿ ಬಾಳೆ ಕೃಷಿಯಲ್ಲಿ ತೊಡಗಿರುವ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ವಿಫಲರಾಗಿದ್ದಾರೆ.ದಾರಂಗಿರಿ ಮಾರುಕಟ್ಟೆಯಿಂದ ಪಂಜಾಬ್, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ದೇಶದ ಅನೇಕ ರಾಜ್ಯಗಳಿಂದ ಜನ ಬಾಳೆಹಣ್ಣು ಖರೀದಿಸುತ್ತಾರೆ. ಬಾಂಗ್ಲಾದೇಶ, ನೇಪಾಳ ಮತ್ತು ಭೂತಾನ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಳೆ ನಷ್ಟ ಸಂಭವಿಸಿರುವ ರೈತರಿಗೆ ಕೂಡಲೇ ಪರಿಹಾರ ವಿತರಣೆ ಕ್ರಮ

Tue Apr 28 , 2020
ರಾಜ್ಯ ಸರ್ಕಾರ ಲಾಕ್ಡೌನ್ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಿದ್ದು ಸ್ವಾಗತಾರ್ಹವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಕೆ. ಕುಮಾರಸ್ವಾಮಿ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲವು ಷರತ್ತುಗಳನ್ನು ವಿಧಿಸಿದ್ದರೆ ಇವುಗಳಲ್ಲಿ ಕೆಲವು ಷರತ್ತುಗಳನ್ನು ಸಡಿಲಿಕೆ ಮಾಡಿದ್ದು, ಇದರಿಂದ ಕೃಷಿ ಹಾಗೂ ಕೈಗಾರಿಕೋದ್ಯಮಕ್ಕೆ ಸಹಾಯಕವಾಗಲಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಗೆ ಅವಕಾಶ ನೀಡಬೇಕು. ಇಲ್ಲಿ ಕಾರ್ಯನಿರ್ವಹಿಸುವ ನೆರೆ ಜಿಲ್ಲೆಯ […]

Advertisement

Wordpress Social Share Plugin powered by Ultimatelysocial