ವಿಷಾಕಪಟ್ಟಣಂನಲ್ಲಿ ಮತ್ತೆ ಕಾಣಿಸಿಕೊಂಡ ದಟ್ಟ ಹೊಗೆ

ಇತ್ತೀಚೆಗಷ್ಟೇ ಇಲ್ಲಿನ ಎಲ್‌ಜಿ ಪಾಲಿರ‍್ಸ್ ಸ್ಥಾವರದಲ್ಲಿ ನಡೆದ ಮಾರಣಾಂತಿಕ ಅನಿಲ ಸೋರಿಕೆ ಉಂಟಾಗಿ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಇದೀಗ ಮತ್ತೆ ನಗರದಲ್ಲಿನ  ಹಿಂದೂಸ್ತಾನ್ ಪೆಟ್ರೋಲಿಯಂ ಕರ‍್ಪೋರೇಷನ್ ಲಿಮಿಟೆಡ್ ತೈಲ ಸಂಸ್ಕರಣಾ ಎಚ್‌ಪಿಸಿಎಲ್‌ನ ‘ಕ್ರೂಡ್ ಡಿಸ್ಟಿಲೇಷನ್ ಯುನಿಟ್‌’ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷದಿಂದ ಕಂಡು ಬಂದಿರುವ ಹೊಗೆ ಎಂದು ತಿಳಿದು ಬಂದಿದ್ದು,  ಹೊಗೆಯನ್ನು ಕಡಿಮೆ ಮಾಡಲಾಗಿದೆ. ಪ್ಲಾಂಟ್-೩ರಲ್ಲಿ ತಾಂತ್ರಿಕ ದೋಷ ಹಾಗೂ ಟೆಂಪರೇಚರ್‌ನಲ್ಲಿ ಬದಲಾವಣೆಯಾಗಿದ್ದ ಕಾರಣ ಘಟಕ ಆರಂಭಿಸಿದ ತಕ್ಷಣವೇ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣವೇ ಅದನ್ನು ಸರಿಪಡಿಸಲಾಗಿದೆ. ಆತಂಕಪಡುವಷ್ಟು ದೊಡ್ಡ ದೋಷವೇನಲ್ಲ ಎಂದು ಪಿಆರ್‌ಓ ಕಾಳಿದಾಸ್ ತಿಳಿಸಿದ್ದಾರೆ. ಅದೇ ರೀತಿ ಎಲ್‌ಜಿ ಪಾಲಿರ‍್ಸ್‌ನಲ್ಲಿ ಆದ ಪ್ರಮಾದದಿಂದ ಎರಡು ಟ್ಯಾಂಕ್‍ಗಳಲ್ಲಿ ಇದ್ದ ಸ್ಪೈರಿನ್ ಎಂಬ ಅನಿಲ ಸೋರಿಕೆಯಾಗಿದ್ದು, ಇದು ಗಾಳಿಯಲ್ಲಿ ವೇಗವಾಗಿ ಹರಡಿದೆಯಷ್ಟೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

   41,000 ಸಾವಿರ ಗಡಿ ದಾಟಿದ ಕೊರೊನಾ ಸೋಂಕು..!

Fri May 22 , 2020
ಕೊರೊನಾ  ವೈರಸ್ ದಾಳಿಯಿಂದ ಮಹಾರಾಷ್ಟ್ರದಲ್ಲಿ ಜನರು ಕಂಗೆಟ್ಟಿದ್ದಾರೆ. ಕೊರೊನಾ ವೈರಸ್ ಹಾವಳಿಯು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 41,000 ದಾಟ್ಟಿದ್ದು ಸಾವಿನ ಸಂಖ್ಯೆ 1,500 ಸಮೀಪದಲ್ಲಿದೆ. ಹಾಗೂ ನಿನ್ನೆ  ಒಂದೇ ದಿನ 41 ಮಂದಿ ಸಾವಿನ್ನಪ್ಪಿದರೆ,1,382 ಜನರಿಗೆ ಕೊರೊನಾ ವೈರಸ್ ತಗುಲಿದೆ. ಮತ್ತು ರಾಜ್ಯಾದಲ್ಲಿ 6,751 ಜನರು ಗುಣಮುಖರಾಗಿದ್ದರೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಮಹಾರಾಷ್ಟ್ರದಲ್ಲಿ ಅಪಕಾರಿಯಾಗಿ ಕಂಡುಬಂದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕೊರೊನಾ […]

Advertisement

Wordpress Social Share Plugin powered by Ultimatelysocial