ಗ್ರೀನ್ ಜೋನ್ನಲ್ಲಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೂ ಡೆಡ್ಲಿ ವೈರಸ್ ಕೊರೋನಾ ಕಾಲಿಟ್ಟಿದ್ದು, ಎಂಟು ಮಂದಿಗೆ ಕೊರೊನಾ ಸೊಂಕು ಧೃಡಪಟ್ಟಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, 8 ಮಂದಿಗೆ ಕೊರೊನಾ ವೈರಸ್ ಇರುವುದು ಧೃಡಪಟ್ಟಿದೆ. ಜಿಲ್ಲೆಯ ಶಿಕಾರಿಪುರ ಮೂಲದ 8 ಮಂದಿ ಹಾಗೂ ತೀರ್ಥಹಳ್ಳಿಯ ಒಬ್ಬರು ತಬ್ಲಿಘಿಗಳು ಗುಜರಾತ್ನ ಅಹಮದಾಬಾದ್ನಿಂದ ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದರು, ಇದೇ ವೇಳೆ ಅವರನ್ನು ಶಿವಮೊಗ್ಗದ ಬಾಪೂಜಿನಗರದ ಹಾಸ್ಟೆಲ್ವೊಂದರಲ್ಲಿ ಕ್ವಾರಂಟೈನ್ ಮಾಡಿ ನಿಗವಹಿಸಲಾಗಿತ್ತು, ಈಗ ವೈದ್ಯಕೀಯ ವರದಿ ಬಂದಿದ್ದು, 8 ಮಂದಿಗೆ ಸೊಂಕು ಇರೋದು ಧೃಡಪಟ್ಟಿದೆ ಎಂದು ಹೇಳಿದರು.
ವರದಿ:ಪೊಲಿಟಿಕಲ್ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ