ಸಹಾಯ ಹಸ್ತ ನೀಡಿದ ಶಾಸಕರ ಮೊಮ್ಮಗಳು

ರಾಯಚೂರು: ಕೊರೋನಾ ಮಹಮಾರಿಗೆ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಉಳ್ಳವರು ನಾವಾಯ್ತು ನಮ್ಮ ಮನೆಯಾಯ್ತು ಎಂದು ಕುಳಿತಿರುವಾಗ ಇಲ್ಲೊಬ್ಬ ಜನನಾಯಕಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಪ್ರತಿ ಹಳ್ಳಿ-ಹಳ್ಳಗಳಿಗೆ ತೆರಳಿ ಹಸಿದ ಕುಟುಂಬಗಳಿಗೆ ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ ಹಾಗೂ ತರಕಾರಿಗಳನ್ನು ಸಹ ನೀಡುವ ಮೂಲಕ ನೊಂದವರ ಬದುಕಿಗೆ ಆಶಾಕಿರಣವಾಗುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ ಅವರು ದಿವಂಗತ ಮಾಜಿ ಸಂಸದ ಎ.ವೆಂಕಟೇಶ ನಾಯಕರ ಮೊಮ್ಮಗಳು ಶ್ರೀದೇವಿ. ನಿರ್ಗತಿಕರಿಗೆ, ಅಲೆಮಾರಿ ಕುಟುಂಬಕ್ಕೆ ಹಾಗೂ ಕಡು ಬಡವರಿಗೆ ದಿನಸಿ ಸಾಮಾಗ್ರಿಗಳು ಸೇರಿದಂತೆ ತರಕಾರಿಗಳ ಕಿಟ್ ವಿತರಣೆ ಮಾಡಿದರು.

Please follow and like us:

Leave a Reply

Your email address will not be published. Required fields are marked *

Next Post

ಡಿಕೆ ಶಿವಕುಮಾರ್ ಮೀಟಿಂಗ್

Mon Apr 20 , 2020
ಬೆಂಗಳೂರು.ಏ.20: ನಿನ್ನೆ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಪಟ್ಟ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಭೆ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತ ಮುಖಂಡರ ಜೊತೆಗೆ ಡಿಕೆ ಶಿವಕುಮಾರ್ ಘಟನೆಯ ಬಗ್ಗೆ ಚರ್ಚೆ ಮಾಡಲಿದ್ದಾರೆ. ಇಂದು ತಮ್ಮ ಸದಾಶಿವನಗರದ ನಿವಾಸದಲ್ಲಿ  ಡಿಕೆ ಶಿವಕುಮಾರ್ ಸಭೆ ನಡೆಸಲಿದ್ದಾರೆ. ಪಕ್ಷದ ಅಲ್ಪಸಂಖ್ಯಾತ ಘಟಕದ ಮುಖಂಡರು, ನಾಯಕರುಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಎನ್ ಎ ಹ್ಯಾರಿಸ್, ಜಮಿರ್ ಅಹಮದ್ ಖಾನ್, […]

Advertisement

Wordpress Social Share Plugin powered by Ultimatelysocial