ಕೋಲಾರ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ನಿಲ್ಲಿಸಿದ್ದ ಎಪಿಎಂಸಿ ಅಧ್ಯಕ್ಷರ ಬೊಲೆರೋ ವಾಹನ ಅನುಮಾನಸ್ಪದ ರೀತಿಯಲ್ಲಿ ಜಖಂಗೊಂಡಿದೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಕೆ.ಮಂಜುನಾಥ ಅವರು ತಮ್ಮ ಬೊಲೆರೋ ವಾಹನವನ್ನು ಎಪಿಎಂಸಿ ಮಾರುಕಟ್ಟೆಯ ತಮ್ಮ ಕಚೇರಿಯ ಬಳಿ ನಿಲ್ಲಿಸಿದ್ದರು. ಇದೆ ಸಮಯದಲ್ಲಿ ಹಿಂಬದಿಯಿದ್ದ ಟೊಮ್ಯಾಟೋ ತುಂಬಿದ ವಾಹನ ಚಾಲಕನ ಅಜಾಗರುಕತೆಯಿಂದ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಜಖಂಗೊಂಡ ಅಧ್ಯಕ್ಷರ ಬೊಲೆರೋ ವಾಹನ ನಗರದ ಸಂಚಾರಿ ಪೊಲೀಸರ ವಶದಲ್ಲಿದ್ದು, ತನಿಖೆ ಕೈಗೊಂಡಿದ್ದಾರೆ. ಅಧ್ಯಕ್ಷರು ಕಳೆದೊಂದು ವಾರದಿಂದ ಹೋಂ ಕ್ವಾರಂಟೈನ್ ನಲಿದ್ದು, ಘಟನೆ ಉದ್ದೇಶಪೂರಕವಾಗಿ ನಡೆದಿರಬಹುದೆಂದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಅನುಮಾನಸ್ಪದ ರೀತಿಯಲ್ಲಿ ಜಖಂಗೊAಡ ಬೊಲೆರೋ ವಾಹನ
Please follow and like us: